ತಾಲ್ಲೂಕಿನ ರಾಯಾಪುರ ಕ್ರಾಸ್ನಲ್ಲಿರುವ ಸುಡುಗಾಡ ಸಿದ್ಧರ ಕಾಲೊನಿಗೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.
ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ದೊಂಬಿದಾಸ, ಹಕ್ಕಿ-ಪಿಕ್ಕಿ, ಸುಡುಗಾಡ ಸಿದ್ಧರು, ದಾಸಯ್ಯಗಳು ಸೇರಿ ಹತ್ತಾರು ಅಲೆಮಾರಿ ಜನಾಂಗಗಳು ತೀವ್ರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳು ಪುಸ್ತಕಗಳಲ್ಲಿ ಮಾತ್ರ ಸೌಲಭ್ಯ ತೋರಿಸುತ್ತಿದ್ದಾರೆ. ಇದರ ಪರಿಣಾಮ ಈ ಜನಾಂಗದವರು ವಸತಿ, ಶಿಕ್ಷಣ, ಆರೋಗ್ಯ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ 'ಹಣೆಬರಹ' ಎಂಬ ಶೀರ್ಷಿಕೆಯನ್ನು ಹೇಳುತ್ತಾ ಜೀವನ ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.