<p><strong>ಹಿರಿಯೂರು:</strong> ಸಾರ್ವಜನಿಕ ಸೇವೆಯನ್ನು ಹೀಗೂ ಮಾಡಬಹುದು ಎನ್ನುವುದಕ್ಕೆ ನಗರದ ಬಾಪೂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್.ವಿ. ಸೂರ್ಯನಾರಾಯಣ ನೇತೃತ್ವದ ತಂಡ ಯುಗಾದಿ–ರಂಜಾನ್ ಹಬ್ಬದ ಖರೀದಿಗೆ ಬಂದಿದ್ದ ಗ್ರಾಹಕರಿಗೆ ಸತತ 21 ನೇ ವರ್ಷ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಿರುವುದು ನಿದರ್ಶನ.</p>.<p>ನಗರದ ಪ್ರಧಾನ ರಸ್ತೆಯಲ್ಲಿರುವ ಫೆಡರಲ್ ಬ್ಯಾಂಕ್ ಮುಂಭಾಗದಲ್ಲಿ ಪ್ರತಿವರ್ಷ ಯುಗಾದಿ ಹಬ್ಬದ ಹಿಂದಿನ ಸೋಮವಾರ ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಬರುವ ಗ್ರಾಹಕರ ದಣಿವನ್ನು ಸ್ವಲ್ಪಮಟ್ಟಿಗಾದರೂ ನೀಗಿಸಬೇಕೆಂಬ ಉದ್ದೇಶದಿಂದ 21 ವರ್ಷದ ಹಿಂದೆ ದಿವಂಗತ ವಿಶ್ವಂ ನಾಗರಾಜ್ ಮಜ್ಜಿಗೆ ವಿತರಿಸುವ ಕಾರ್ಯಕ್ರಮ ಆರಂಭಿಸಿದ್ದರು. ಅಪಘಾತವೊಂದರಲ್ಲಿ ಅವರು ಮೃತರಾದ ನಂತರ ಆತನ ನೆನಪಿನಲ್ಲಿ ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಮುಂದುವರಿಸಿದ್ದೇವೆ. ಯುಗಾದಿ ಹಬ್ಬದ ಸಮಯದಲ್ಲಿ ಬಿಸಿಲಿನ ಬೇಗೆ ಹೆಚ್ಚಿರುತ್ತದೆ. ಹೀಗಾಗಿ ನೀರಿನ ಬದಲು ಮಜ್ಜಿಗೆ ಕೊಡುತ್ತಿದ್ದೇವೆ ಎಂದು ಕ್ಲಬ್ ಅಧ್ಯಕ್ಷ ಸೂರ್ಯನಾರಾಯಣ ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಬಿ.ಎನ್. ಪ್ರಕಾಶ್, ಅಸ್ಗರ್ ಅಹಮದ್, ಎಂ.ಜಿ. ಗೋಪಾಲ್, ಬಿ.ಆರ್. ರಮೇಶ್, ಓಂಕಾರಪ್ಪ, ನಂದಿನಿಹೋಟೆಲ್ ಬಾಬು, ಪಲ್ಲವಿಅಭಿಷೇಕ್, ನಂಬಿರಾಜನ್, ಶೇಖರ್, ಆಟೋ ತಿಮ್ಮಣ್ಣ, ಚಿಕ್ಕೀರಪ್ಪ, ಹಬೀಬುಲ್ಲ ಚೋಟು, ಜಫ್ರುದ್ದೀನ್ ಪಂಟು, ಖಲೀಲ್, ಸಹರಾ ಶ್ರೀನಿವಾಸ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ಸಾರ್ವಜನಿಕ ಸೇವೆಯನ್ನು ಹೀಗೂ ಮಾಡಬಹುದು ಎನ್ನುವುದಕ್ಕೆ ನಗರದ ಬಾಪೂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್.ವಿ. ಸೂರ್ಯನಾರಾಯಣ ನೇತೃತ್ವದ ತಂಡ ಯುಗಾದಿ–ರಂಜಾನ್ ಹಬ್ಬದ ಖರೀದಿಗೆ ಬಂದಿದ್ದ ಗ್ರಾಹಕರಿಗೆ ಸತತ 21 ನೇ ವರ್ಷ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಿರುವುದು ನಿದರ್ಶನ.</p>.<p>ನಗರದ ಪ್ರಧಾನ ರಸ್ತೆಯಲ್ಲಿರುವ ಫೆಡರಲ್ ಬ್ಯಾಂಕ್ ಮುಂಭಾಗದಲ್ಲಿ ಪ್ರತಿವರ್ಷ ಯುಗಾದಿ ಹಬ್ಬದ ಹಿಂದಿನ ಸೋಮವಾರ ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಬರುವ ಗ್ರಾಹಕರ ದಣಿವನ್ನು ಸ್ವಲ್ಪಮಟ್ಟಿಗಾದರೂ ನೀಗಿಸಬೇಕೆಂಬ ಉದ್ದೇಶದಿಂದ 21 ವರ್ಷದ ಹಿಂದೆ ದಿವಂಗತ ವಿಶ್ವಂ ನಾಗರಾಜ್ ಮಜ್ಜಿಗೆ ವಿತರಿಸುವ ಕಾರ್ಯಕ್ರಮ ಆರಂಭಿಸಿದ್ದರು. ಅಪಘಾತವೊಂದರಲ್ಲಿ ಅವರು ಮೃತರಾದ ನಂತರ ಆತನ ನೆನಪಿನಲ್ಲಿ ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಮುಂದುವರಿಸಿದ್ದೇವೆ. ಯುಗಾದಿ ಹಬ್ಬದ ಸಮಯದಲ್ಲಿ ಬಿಸಿಲಿನ ಬೇಗೆ ಹೆಚ್ಚಿರುತ್ತದೆ. ಹೀಗಾಗಿ ನೀರಿನ ಬದಲು ಮಜ್ಜಿಗೆ ಕೊಡುತ್ತಿದ್ದೇವೆ ಎಂದು ಕ್ಲಬ್ ಅಧ್ಯಕ್ಷ ಸೂರ್ಯನಾರಾಯಣ ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಬಿ.ಎನ್. ಪ್ರಕಾಶ್, ಅಸ್ಗರ್ ಅಹಮದ್, ಎಂ.ಜಿ. ಗೋಪಾಲ್, ಬಿ.ಆರ್. ರಮೇಶ್, ಓಂಕಾರಪ್ಪ, ನಂದಿನಿಹೋಟೆಲ್ ಬಾಬು, ಪಲ್ಲವಿಅಭಿಷೇಕ್, ನಂಬಿರಾಜನ್, ಶೇಖರ್, ಆಟೋ ತಿಮ್ಮಣ್ಣ, ಚಿಕ್ಕೀರಪ್ಪ, ಹಬೀಬುಲ್ಲ ಚೋಟು, ಜಫ್ರುದ್ದೀನ್ ಪಂಟು, ಖಲೀಲ್, ಸಹರಾ ಶ್ರೀನಿವಾಸ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>