<p><strong>ಹಿರಿಯೂರು: </strong>ಶಾಸಕಿ ಕೆ. ಪೂರ್ಣಿಮಾ ಅವರು ‘ಶಾಸಕರ ಪ್ರದೇಶಾಭಿವೃದ್ಧಿ ನಿಧಿ’ಯನ್ನು ಶಿಥಿಲಗೊಂಡಿದ್ದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಆಸ್ಪತ್ರೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಾಗಿ ಬಳಸಿದ್ದಾರೆ.</p>.<p>ಮೂರು ವರ್ಷಗಳಲ್ಲಿ ನಿಧಿ ಬಳಕೆ ಮಾಡಿಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆ, ಅಂಗನವಾಡಿ ಕಟ್ಟಡಗಳ ದುರಸ್ತಿ, ರಾಜಕಾಲುವೆ ಹಾಗೂ ದೇಗುಲಗಳ ಜೀರ್ಣೋದ್ಧಾರಕ್ಕೂ ಶಾಸಕರು ಉದಾರ ನೆರವು ನೀಡಿದ್ದಾರೆ. ಕೋವಿಡ್ ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಖನಿಜ ನಿಧಿ (ಡಿಎಂಎಫ್) ನೆರವು ಪಡೆಯಲಾಗಿದೆ.</p>.<p>2018–19ನೇ ಸಾಲಿನಲ್ಲಿ ₹ 1.71 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 1.2 ಕೋಟಿಯನ್ನು ಶಾಲಾ ಕಟ್ಟಡ ಮತ್ತು ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಬಳಸಲಾಗಿದೆ. ₹ 30 ಲಕ್ಷವನ್ನು ಆಸ್ಪತ್ರೆಗಳ ಆಧುನೀಕರಣಕ್ಕೆ ವ್ಯಯಿಸಲಾಗಿದೆ. ಉಳಿದ ಹಣವನ್ನು ದೇಗುಲಗಳ ಜೀರ್ಣೋದ್ಧಾರಕ್ಕೆ ಬಳಸುವ ಮೂಲಕ ಪೂರ್ಣ ಹಣವನ್ನು ಖರ್ಚು ಮಾಡಲಾಗಿದೆ.</p>.<p>2019–20ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ₹ 2 ಕೋಟಿಯಲ್ಲಿ ₹ 1.5 ಕೋಟಿ ಖರ್ಚಾಗಿದೆ. ₹ 50 ಲಕ್ಷ ವೆಚ್ಚದ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ₹ 80 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆಗಳಿಗೆ ಕೊಠಡಿ ನಿರ್ಮಾಣ, ₹ 50 ಲಕ್ಷ ವೆಚ್ಚದಲ್ಲಿ 5 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಉಳಿದ ₹ 70 ಲಕ್ಷದಲ್ಲಿ ಶಾಲಾ ಶೌಚಾಲಯ ನಿರ್ಮಾಣ, ರಂಗಮಂದಿರ, ಆಸ್ಪತ್ರೆಗಳಿಗೆ ಕಾಂಪೌಂಡ್, ಆರೋಗ್ಯ ಉಪಕೇಂದ್ರಗಳ ನಿರ್ಮಾಣ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ. ಈ ಕಾಮಗಾರಿಗಳು ಇನ್ನೂ ಮುಕ್ತಾಯವಾಗಿಲ್ಲ.</p>.<p>2020–21ನೇ ಸಾಲಿನ ₹ 2 ಕೋಟಿ ಅನುದಾನದಲ್ಲಿ ₹ 1 ಕೋಟಿ ಬಿಡುಗಡೆಯಾಗಿದೆ. ಕೋವಿಡ್ ಕಾರಣಕ್ಕೆ ಅನುದಾನವನ್ನು ಸಕಾಲಕ್ಕೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಪೊಲೀಸ್ ಇಲಾಖೆಗೆ ವಾಹನ ಖರೀದಿಸಲು ₹ 40 ಲಕ್ಷಕ್ಕೆ ಅನುಮೋದನೆ ದೊರೆತಿದೆ. ವೀರಶೈವ ರುದ್ರಭೂಮಿ ಅಭಿವೃದ್ಧಿಗೆ ₹ 10 ಲಕ್ಷ, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹ 50 ಲಕ್ಷ ಮೀಸಲಿಡಲಾಗಿದೆ. ಬಾಕಿ ಉಳಿದಿರುವ ₹ 1 ಕೋಟಿಯಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕ, ₹ 40 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕ, 91 ದೇಗುಲಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ.</p>.<p>ಕುಸಿದು ಬಿದ್ದಿದ್ದ ವೀರವ್ವನಾಗತಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ₹ 17.5 ಲಕ್ಷ ಅನುದಾನ ನೀಡಲಾಗಿದೆ. ಇದರಲ್ಲಿ ಹೊಸಕಟ್ಟಡ ನಿರ್ಮಿಸಲಾಗಿದೆ. ಹಿರಿಯೂರಿನ ಸರ್ಕಾರಿ ಪಿಯು ಕಾಲೇಜಿಗೆ ₹ 24 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿ ಒದಗಿಸಲಾಗಿದೆ. ಪಿಲ್ಲಾಲಿ ಪ್ರೌಢಶಾಲೆಗೆ ₹ 15 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಮಾಡಲಾಗಿದೆ. 11 ಹಳ್ಳಿಗಳಲ್ಲಿ ತಲಾ 10 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಆರಂಭಕ್ಕೆ ಅನುದಾನ ನೀಡಲಾಗಿದೆ. 2019–20ನೇ ಸಾಲಿನವರೆಗೆ ಕೈಗೆತ್ತಿಕೊಂಡಿದ್ದ ಕಾಮಗಾರಿಗಳಲ್ಲಿ ಕೆಲವು ಇನ್ನೂ ಪ್ರಗತಿಯಲ್ಲಿವೆ.</p>.<p>2021-22ನೇ ಸಾಲಿನಲ್ಲಿ ಶಾಸಕರ ನಿಧಿಯಲ್ಲಿ 22 ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಲ್ಲಿಕೆಯಾಗಿದೆ. ಈ ಕಾಮಗಾರಿಗಳಲ್ಲಿ ಎರಡು ಕಾಮಗಾರಿ ಹೊರತುಪಡಿಸಿ ಉಳಿದವುಗಳಿಗೆ ಇನ್ನೂ ಆಡಳಿತಾತ್ಮಕ ಅನುಮೋದನೆ ಸಿಗುವುದು ಬಾಕಿ ಇದೆ. ಪ್ರಸಕ್ತ ವರ್ಷ ದೇಗುಲ ಹಾಗೂ ಸಮುದಾಯ ಭವನಗಳಿಗೆ ಹೆಚ್ಚು ಒತ್ತು ಸಿಕ್ಕಿರುವಂತೆ ಕಾಣುತ್ತಿದೆ. ಬಹುತೇಕ ಎಲ್ಲ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಗಿರಿಜನ ಉಪಯೋಜನೆ, ವಿಶೇಷ ಘಟಕ ಯೋಜನೆ ಅಡಿಯಲ್ಲಿಯೂ 20ಕ್ಕೂ ಹೆಚ್ಚು ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ.</p>.<p class="Briefhead">**</p>.<p>ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ನಿಧಿ ಬಳಸಲಾಗಿದೆ. ದೇಗುಲ ಜೀರ್ಣೋದ್ಧಾರ, ಸಮುದಾಯ ಭವನ, ಬ್ಯಾರೇಜ್, ರಸ್ತೆ ಅಭಿವೃದ್ಧಿಗೆ ಬೇಡಿಕೆ ಇದೆ. ಇನ್ನು ಮುಂದೆ ಇವುಗಳಿಗೆ ಒತ್ತು ನೀಡಲಾಗುವುದು.<br />-<em><strong>ಕೆ. ಪೂರ್ಣಿಮಾ, ಶಾಸಕರು, ಹಿರಿಯೂರು</strong></em></p>.<p><strong>* 2018–19ರಲ್ಲಿ ಲಭ್ಯವಾದ ನಿಧಿ:</strong> ₹ 1.71 ಕೋಟಿ. ಖರ್ಚಾಗಿರುವುದು ₹ 1.71 ಕೋಟಿ</p>.<p><strong>* 2019–20ರಲ್ಲಿ ಬಿಡುಗಡೆ:</strong> ₹ 2 ಕೋಟಿ. ಖರ್ಚಾಗಿರುವುದು ₹ 1.50 ಕೋಟಿ</p>.<p><strong>* 2020–21ರಲ್ಲಿ ಬಿಡುಗಡೆ: </strong>₹ 1 ಕೋಟಿ. ಖರ್ಚಾಗಿರುವುದು: ₹ 1 ಕೋಟಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು: </strong>ಶಾಸಕಿ ಕೆ. ಪೂರ್ಣಿಮಾ ಅವರು ‘ಶಾಸಕರ ಪ್ರದೇಶಾಭಿವೃದ್ಧಿ ನಿಧಿ’ಯನ್ನು ಶಿಥಿಲಗೊಂಡಿದ್ದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಆಸ್ಪತ್ರೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಾಗಿ ಬಳಸಿದ್ದಾರೆ.</p>.<p>ಮೂರು ವರ್ಷಗಳಲ್ಲಿ ನಿಧಿ ಬಳಕೆ ಮಾಡಿಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆ, ಅಂಗನವಾಡಿ ಕಟ್ಟಡಗಳ ದುರಸ್ತಿ, ರಾಜಕಾಲುವೆ ಹಾಗೂ ದೇಗುಲಗಳ ಜೀರ್ಣೋದ್ಧಾರಕ್ಕೂ ಶಾಸಕರು ಉದಾರ ನೆರವು ನೀಡಿದ್ದಾರೆ. ಕೋವಿಡ್ ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಖನಿಜ ನಿಧಿ (ಡಿಎಂಎಫ್) ನೆರವು ಪಡೆಯಲಾಗಿದೆ.</p>.<p>2018–19ನೇ ಸಾಲಿನಲ್ಲಿ ₹ 1.71 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 1.2 ಕೋಟಿಯನ್ನು ಶಾಲಾ ಕಟ್ಟಡ ಮತ್ತು ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಬಳಸಲಾಗಿದೆ. ₹ 30 ಲಕ್ಷವನ್ನು ಆಸ್ಪತ್ರೆಗಳ ಆಧುನೀಕರಣಕ್ಕೆ ವ್ಯಯಿಸಲಾಗಿದೆ. ಉಳಿದ ಹಣವನ್ನು ದೇಗುಲಗಳ ಜೀರ್ಣೋದ್ಧಾರಕ್ಕೆ ಬಳಸುವ ಮೂಲಕ ಪೂರ್ಣ ಹಣವನ್ನು ಖರ್ಚು ಮಾಡಲಾಗಿದೆ.</p>.<p>2019–20ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ₹ 2 ಕೋಟಿಯಲ್ಲಿ ₹ 1.5 ಕೋಟಿ ಖರ್ಚಾಗಿದೆ. ₹ 50 ಲಕ್ಷ ವೆಚ್ಚದ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ₹ 80 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆಗಳಿಗೆ ಕೊಠಡಿ ನಿರ್ಮಾಣ, ₹ 50 ಲಕ್ಷ ವೆಚ್ಚದಲ್ಲಿ 5 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಉಳಿದ ₹ 70 ಲಕ್ಷದಲ್ಲಿ ಶಾಲಾ ಶೌಚಾಲಯ ನಿರ್ಮಾಣ, ರಂಗಮಂದಿರ, ಆಸ್ಪತ್ರೆಗಳಿಗೆ ಕಾಂಪೌಂಡ್, ಆರೋಗ್ಯ ಉಪಕೇಂದ್ರಗಳ ನಿರ್ಮಾಣ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ. ಈ ಕಾಮಗಾರಿಗಳು ಇನ್ನೂ ಮುಕ್ತಾಯವಾಗಿಲ್ಲ.</p>.<p>2020–21ನೇ ಸಾಲಿನ ₹ 2 ಕೋಟಿ ಅನುದಾನದಲ್ಲಿ ₹ 1 ಕೋಟಿ ಬಿಡುಗಡೆಯಾಗಿದೆ. ಕೋವಿಡ್ ಕಾರಣಕ್ಕೆ ಅನುದಾನವನ್ನು ಸಕಾಲಕ್ಕೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಪೊಲೀಸ್ ಇಲಾಖೆಗೆ ವಾಹನ ಖರೀದಿಸಲು ₹ 40 ಲಕ್ಷಕ್ಕೆ ಅನುಮೋದನೆ ದೊರೆತಿದೆ. ವೀರಶೈವ ರುದ್ರಭೂಮಿ ಅಭಿವೃದ್ಧಿಗೆ ₹ 10 ಲಕ್ಷ, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹ 50 ಲಕ್ಷ ಮೀಸಲಿಡಲಾಗಿದೆ. ಬಾಕಿ ಉಳಿದಿರುವ ₹ 1 ಕೋಟಿಯಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕ, ₹ 40 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕ, 91 ದೇಗುಲಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ.</p>.<p>ಕುಸಿದು ಬಿದ್ದಿದ್ದ ವೀರವ್ವನಾಗತಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ₹ 17.5 ಲಕ್ಷ ಅನುದಾನ ನೀಡಲಾಗಿದೆ. ಇದರಲ್ಲಿ ಹೊಸಕಟ್ಟಡ ನಿರ್ಮಿಸಲಾಗಿದೆ. ಹಿರಿಯೂರಿನ ಸರ್ಕಾರಿ ಪಿಯು ಕಾಲೇಜಿಗೆ ₹ 24 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿ ಒದಗಿಸಲಾಗಿದೆ. ಪಿಲ್ಲಾಲಿ ಪ್ರೌಢಶಾಲೆಗೆ ₹ 15 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಮಾಡಲಾಗಿದೆ. 11 ಹಳ್ಳಿಗಳಲ್ಲಿ ತಲಾ 10 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಆರಂಭಕ್ಕೆ ಅನುದಾನ ನೀಡಲಾಗಿದೆ. 2019–20ನೇ ಸಾಲಿನವರೆಗೆ ಕೈಗೆತ್ತಿಕೊಂಡಿದ್ದ ಕಾಮಗಾರಿಗಳಲ್ಲಿ ಕೆಲವು ಇನ್ನೂ ಪ್ರಗತಿಯಲ್ಲಿವೆ.</p>.<p>2021-22ನೇ ಸಾಲಿನಲ್ಲಿ ಶಾಸಕರ ನಿಧಿಯಲ್ಲಿ 22 ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಲ್ಲಿಕೆಯಾಗಿದೆ. ಈ ಕಾಮಗಾರಿಗಳಲ್ಲಿ ಎರಡು ಕಾಮಗಾರಿ ಹೊರತುಪಡಿಸಿ ಉಳಿದವುಗಳಿಗೆ ಇನ್ನೂ ಆಡಳಿತಾತ್ಮಕ ಅನುಮೋದನೆ ಸಿಗುವುದು ಬಾಕಿ ಇದೆ. ಪ್ರಸಕ್ತ ವರ್ಷ ದೇಗುಲ ಹಾಗೂ ಸಮುದಾಯ ಭವನಗಳಿಗೆ ಹೆಚ್ಚು ಒತ್ತು ಸಿಕ್ಕಿರುವಂತೆ ಕಾಣುತ್ತಿದೆ. ಬಹುತೇಕ ಎಲ್ಲ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಗಿರಿಜನ ಉಪಯೋಜನೆ, ವಿಶೇಷ ಘಟಕ ಯೋಜನೆ ಅಡಿಯಲ್ಲಿಯೂ 20ಕ್ಕೂ ಹೆಚ್ಚು ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ.</p>.<p class="Briefhead">**</p>.<p>ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ನಿಧಿ ಬಳಸಲಾಗಿದೆ. ದೇಗುಲ ಜೀರ್ಣೋದ್ಧಾರ, ಸಮುದಾಯ ಭವನ, ಬ್ಯಾರೇಜ್, ರಸ್ತೆ ಅಭಿವೃದ್ಧಿಗೆ ಬೇಡಿಕೆ ಇದೆ. ಇನ್ನು ಮುಂದೆ ಇವುಗಳಿಗೆ ಒತ್ತು ನೀಡಲಾಗುವುದು.<br />-<em><strong>ಕೆ. ಪೂರ್ಣಿಮಾ, ಶಾಸಕರು, ಹಿರಿಯೂರು</strong></em></p>.<p><strong>* 2018–19ರಲ್ಲಿ ಲಭ್ಯವಾದ ನಿಧಿ:</strong> ₹ 1.71 ಕೋಟಿ. ಖರ್ಚಾಗಿರುವುದು ₹ 1.71 ಕೋಟಿ</p>.<p><strong>* 2019–20ರಲ್ಲಿ ಬಿಡುಗಡೆ:</strong> ₹ 2 ಕೋಟಿ. ಖರ್ಚಾಗಿರುವುದು ₹ 1.50 ಕೋಟಿ</p>.<p><strong>* 2020–21ರಲ್ಲಿ ಬಿಡುಗಡೆ: </strong>₹ 1 ಕೋಟಿ. ಖರ್ಚಾಗಿರುವುದು: ₹ 1 ಕೋಟಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>