‘ಕಲ್ಯಾಣಿಗೆ ಹೊರಗಿನಿಂದ ನೀರು ಹರಿದು ಬರುವುದಿಲ್ಲ. ಅಂತರ್ಜಲದಿಂದಲೇ ತುಂಬಿದ್ದು, ಶುದ್ಧ ನೀರು ಸಂಗ್ರಹವಾಗಿದೆ. ತಾಳ್ಯ ಹಾಗೂ ನಮ್ಮೂರಿನ ಕೆರೆಯಲ್ಲಿ ನೀರು ಬಂದರೆ ಕಲ್ಯಾಣಿಗೂ ನೀರು ಬರುತ್ತದೆ. ಅಲ್ಲದೆ ಈ ವರ್ಷ ವಾಣಿ ವಿಲಾಸ ಸಾಗರದಲ್ಲಿಯೂ 125 ಅಡಿ ನೀರಿದ್ದು, ಅಲ್ಲಿನ ನೀರೂ ಅಂತರ್ಜಲದ ಮೂಲಕ ಬಂದಿರಬಹುದು. ಈಗ ಕಲ್ಯಾಣಿಯಲ್ಲಿ ನೆಲಮಟ್ಟದವರೆಗೆ ನೀರಿದ್ದು, ಸುತ್ತಲಿನ ಅಂತರ್ಜಲ ಹೆಚ್ಚಾಗಿದೆ’ ಎನ್ನುತ್ತಾರೆ ಗ್ರಾಮದ ಆನಂದ್, ಟಿ. ಮಹಾಂತೇಶ್ ಹಾಗೂ ಶ್ರೀನಿಧಿ.