ಮಧ್ಯಾಹ್ನ 12.30ಕ್ಕೆ ಡಿ.ಕೆ.ಶಿವಕುಮಾರ್ ವೇದಿಕೆಗೆ ಆಗಮಿಸಿದ್ದರು. ಮಧ್ಯಾಹ್ನ 1.45 ರ ವೇಳೆಗೆ ಮೆರವಣಿಗೆ ಮುಗಿಸಿಕೊಂಡು ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತಸ್ವಾಮೀಜಿ ಧಾವಿಸಿದರು. ಎಚ್.ಡಿ. ಕುಮಾರಸ್ವಾಮಿ ಬರುವವರೆಗೆ ಉದ್ಘಾಟನೆ ಮುಂದೂಡಿದ ಸಂಘಟಕರು ನಾಡಗೀತೆ, ರೈತಗೀತೆ, ಪ್ರಾಸ್ತಾವಿಕ ಭಾಷಣಕ್ಕೆ ವೇದಿಕೆ ಮೀಸಲಿಟ್ಟರು. ಇದನ್ನು ಲೆಕ್ಕಿಸದೆ ತಮ್ಮ ಬಳಿ ಬರುತ್ತಿದ್ದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಡಿ.ಕೆ. ಶಿವಕುಮಾರ್ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು.