‘ಉತ್ಸವಕ್ಕೆ ಬರುವ ಸುಮಾರು 5 ಲಕ್ಷ ಭಕ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 350 ಬಾಣಸಿಗರು ಅಡುಗೆ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಊಟಕ್ಕೆ 600 ಕ್ವಿಂಟಲ್ ಲಾಡು ತಯಾರಿಸುತ್ತಿದ್ದು, ಸುಮಾರು 300 ಕ್ವಿಂಟಲ್ ಅಕ್ಕಿ, 50 ಕ್ವಿಂಟಲ್ ಬೇಳೆ ಹಾಗೂ ಬೆಂಗಳೂರಿನಿಂದ ಲಾರಿಗಳಲ್ಲಿ ತರಕಾರಿ ತರಿಸಲಾಗಿದೆ. ಉಪ್ಪಿಟ್ಟಿಗೆ 15 ಕ್ವಿಂಟಲ್ ರವೆ ತರಿಸಲಾಗಿದ್ದು, 8 ಕ್ವಿಂಟಲ್ ಅಕ್ಕಿಯಿಂದ ಪುಳಿಯೋಗರೆ ತಯಾರಿಸಲಾಗುವುದು. ಫೆ.6ರ ಸಂಜೆ 4ರಿಂದ ಊಟ ಆರಂಭವಾಗಲಿದ್ದು, ಬಫೆ ಮಾದರಿಯಲ್ಲಿ ಊಟ ವಿತರಿಸಲಾಗುವುದು. ಒಮ್ಮೆಗೆ 20 ಕ್ವಿಂಟಲ್ ನಂತೆ ಅನ್ನ ತಯಾರಿಸಲು ಸೂಚಿಸಿದ್ದು, ಎಷ್ಟೇ ಭಕ್ತರು ಬಂದರೂ ಊಟ ನೀಡುತ್ತೇವೆ’ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಡಿ. ರಂಗಯ್ಯ ತಿಳಿಸಿದ್ದಾರೆ.