ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

Last Updated 2 ಏಪ್ರಿಲ್ 2018, 6:37 IST
ಅಕ್ಷರ ಗಾತ್ರ

ಕಲಬುರ್ಗಿ: ಆಳಂದ ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಸಮ್ಮುಖದಲ್ಲಿ ಶನಿವಾರ ಬಿಜೆಪಿ ಸೇರ್ಪಡೆಯಾದರು.ಈ ವೇಳೆ ಮಾತನಾಡಿದ ಗುತ್ತೇದಾರ, ‘ನಾನು ಯಾವತ್ತೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಎಲ್ಲ ಧರ್ಮದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೇನೆಯೇ ಹೊರತು ಧರ್ಮ ಒಡೆಯುವ ಕೆಲಸ ಮಾಡಿಲ್ಲ’ ಎಂದು ಹೇಳಿದರು.

ಮುಖಂಡರಾದ ತಯ್ಯಬ ಅಲಿ ಜರ್ದಿ, ರಿಯಾಜ್, ಮುನ್ನಾ ನೌಕಾಡೆ, ಬಾಬು ನೌಕಾಡೆ, ಹನೀಫ್ ಬಾರುದ್ವಾಲೆ, ಸೈಫನ್ ಮುಲುಕ್, ಅಬುಲ್ ಸಲಾಂ ಸಗರಿ, ರಫೀಕ್ ಪಾಲನಾ, ಅಹ್ಮದ ಅಲಿ ಶೇಖ, ಅಯ್ಯಾಜಿ ಅಲಿ ರೋತೆ, ಆಸೀಫ್ ಚುಲಬುಲ್, ಯೂನುಸ್ ಭಾಗವಾನ್ ಸೇರಿ ಅನೇಕರು ಸೇರ್ಪಡೆಯಾದರು.

ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಿಬೂಬ್ ಬಾಷಾ ಶೇಖ್ ತಲೆಕುಣಿ, ಮುಖಂಡರಾದ ಮಹಿಬೂಬ್ ಪಟೇಲ್, ಅಸೀಫ್ ಅನ್ಸಾರಿ, ಝಾಕೀರ ಅನ್ಸಾರಿ, ಯೂಸುಫ್ ಅನ್ಸಾರಿ, ಲಾಯಕ ಅಲಿ ಅನ್ಸಾರಿ, ರಶೀದ್ ಅನ್ಸಾರಿ,ಸಿ.ಕೆ.ಪಾಟೀಲ, ನಿಜಲಿಂಗಪ್ಪ ಕೊರಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT