<p><strong>ಹಿರಿಯೂರು:</strong> ಸರಿಯಾದ ಧಾರ್ಮಿಕ ಶಿಕ್ಷಣ ಇಲ್ಲದಿದ್ದರೆ ಸಮಾಜದ ಸಾಮರಸ್ಯ ಕೆಡುತ್ತದೆ. ಅದು ಇಡೀ ಜಗತ್ತಿಗೆ ಅಪಾಯ ತಂದೊಡ್ಡುತ್ತದೆ ಎಂದು ಬಸವ ಹರಳಯ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಹರಳಯ್ಯ ಗುರುಪೀಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಶರಣ ಹರಳಯ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ದುಷ್ಟ ಶಕ್ತಿಗಳಿವೆ ಎನ್ನುವುದಕ್ಕೆ ಇರಾನ್–ಇಸ್ರೇಲ್ ದೇಶಗಳ ನಡುವಿನ ಯುದ್ಧವೇ ಸಾಕ್ಷಿ. ಆಡಳಿತಗಾರರು ಅಹಿಂಸೆಯ ಪ್ರತಿಪಾದಕರಾಗಿರುವ ಜೊತೆಗೆ ಸರ್ವಧರ್ಮ ಸಮನ್ವಯಕ್ಕೂ ಒತ್ತು ನೀಡಬೇಕು ಎಂದು ಸ್ವಾಮೀಜಿ ತಿಳಿಸಿದರು.</p>.<p>ಶಿವಪಥದಲ್ಲಿ ನಡೆದ ಹರಳಯ್ಯನವರು ಕಲ್ಯಾಣ ಕ್ರಾಂತಿಯ ಮೂಲಕ ಲೋಕ ಕಲ್ಯಾಣ ಮಾಡಿದರು. ಸಾಮಾಜಿಕ ಜನಜಾಗೃತಿಗಾಗಿ, ಮೌಢ್ಯದಿಂದ ಜನರನ್ನು ಹೊರತರಬೇಕು ಎಂಬ ಉದ್ದೇಶದಿಂದ ಈ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.</p>.<p>ಚಿತ್ರದುರ್ಗದ ಚಿಂತಕ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ಜಯಪ್ರಕಾಶ್, ಸಿದ್ದೇಶ್ ಹಿಟ್ನೂರ್, ಕಲಾವಿದ ಕುಮಾರ್, ಮಲ್ಲಿಕಾರ್ಜುನ್, ಕಲ್ಲಹಟ್ಟಿ ಹರೀಶ್, ಜಯಶೀಲ, ನಂದಿನಿ, ರಕ್ಷಿತ ಆಯೇಷ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ಸರಿಯಾದ ಧಾರ್ಮಿಕ ಶಿಕ್ಷಣ ಇಲ್ಲದಿದ್ದರೆ ಸಮಾಜದ ಸಾಮರಸ್ಯ ಕೆಡುತ್ತದೆ. ಅದು ಇಡೀ ಜಗತ್ತಿಗೆ ಅಪಾಯ ತಂದೊಡ್ಡುತ್ತದೆ ಎಂದು ಬಸವ ಹರಳಯ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಹರಳಯ್ಯ ಗುರುಪೀಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಶರಣ ಹರಳಯ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ದುಷ್ಟ ಶಕ್ತಿಗಳಿವೆ ಎನ್ನುವುದಕ್ಕೆ ಇರಾನ್–ಇಸ್ರೇಲ್ ದೇಶಗಳ ನಡುವಿನ ಯುದ್ಧವೇ ಸಾಕ್ಷಿ. ಆಡಳಿತಗಾರರು ಅಹಿಂಸೆಯ ಪ್ರತಿಪಾದಕರಾಗಿರುವ ಜೊತೆಗೆ ಸರ್ವಧರ್ಮ ಸಮನ್ವಯಕ್ಕೂ ಒತ್ತು ನೀಡಬೇಕು ಎಂದು ಸ್ವಾಮೀಜಿ ತಿಳಿಸಿದರು.</p>.<p>ಶಿವಪಥದಲ್ಲಿ ನಡೆದ ಹರಳಯ್ಯನವರು ಕಲ್ಯಾಣ ಕ್ರಾಂತಿಯ ಮೂಲಕ ಲೋಕ ಕಲ್ಯಾಣ ಮಾಡಿದರು. ಸಾಮಾಜಿಕ ಜನಜಾಗೃತಿಗಾಗಿ, ಮೌಢ್ಯದಿಂದ ಜನರನ್ನು ಹೊರತರಬೇಕು ಎಂಬ ಉದ್ದೇಶದಿಂದ ಈ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.</p>.<p>ಚಿತ್ರದುರ್ಗದ ಚಿಂತಕ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ಜಯಪ್ರಕಾಶ್, ಸಿದ್ದೇಶ್ ಹಿಟ್ನೂರ್, ಕಲಾವಿದ ಕುಮಾರ್, ಮಲ್ಲಿಕಾರ್ಜುನ್, ಕಲ್ಲಹಟ್ಟಿ ಹರೀಶ್, ಜಯಶೀಲ, ನಂದಿನಿ, ರಕ್ಷಿತ ಆಯೇಷ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>