<p>ಹಿರಿಯೂರು: ನಗರಸಭೆ ವತಿಯಿಂದ ಶುಕ್ರವಾರ ಸಾರ್ವಜನಿಕರು, ವ್ಯಾಪಾರೋದ್ಯಮಿಗಳು ಹಾಗೂ ತ್ಯಾಜ್ಯ ಉತ್ಪಾದಕರಿಗೆ ತ್ಯಾಜ್ಯ ವಿಂಗಡಣೆ ಬಗ್ಗೆ ಅರಿವು ಮೂಡಿಸಲಾಯಿತು.</p>.<p>‘ಕೇಂದ್ರ ಅರಣ್ಯ ಸಚಿವಾಲಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಏ 1ರಿಂದ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ ಜಾರಿಗೆ ತಂದಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಗರಸಭೆಯಿಂದ ಆರಂಭಿಸಿದ್ದೇವೆ. ನಗರವನ್ನು ಅಂದವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರೇ ತ್ಯಾಜ್ಯ ವಿಂಗಡಿಸಿ ನಗರಸಭೆಯ ಕಸದ ವಾಹನಕ್ಕೆ ಕೊಡಬೇಕು’ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೌರಾಯುಕ್ತ ಎ. ವಾಸೀಂ ಮನವಿ ಮಾಡಿದರು.</p>.<p>‘ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಲು ನಾಲ್ಕು ವಿಧದ ಬಣ್ಣಗಳಿರುವ ಕಸದ ಬುಟ್ಟಿಗಳನ್ನು ನೀಡುತ್ತಿದ್ದು, ಹಸಿರು ಬಣ್ಣದ ಬುಟ್ಟಿಯಲ್ಲಿ ಅಡಿಗೆ ಮನೆಯ ತ್ಯಾಜ್ಯ, ಆಹಾರ ತ್ಯಾಜ್ಯ, ತರಕಾರಿ, ಮಾಂಸ, ಹಣ್ಣು, ಹೂವು, ಉದ್ಯಾನದ ತ್ಯಾಜ್ಯ ಒಳಗೊಂಡಂತೆ ಕೊಳೆಯುವ ಹಸಿ ತ್ಯಾಜ್ಯ ವಸ್ತುಗಳನ್ನು ಹಾಕಬೇಕು. ನೀಲಿ ಬಣ್ಣದ ಕಸದ ಬುಟ್ಟಿಯಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆಯ ತ್ಯಾಜ್ಯ, ಕಬ್ಬಿಣ, ರಬ್ಬರ್, ಮರದ ತ್ಯಾಜ್ಯಗಳನ್ನು ಹಾಕಬೇಕು’ ಎಂದು ಹಿರಿಯ ಆರೋಗ್ಯ ನಿರೀಕ್ಷಕಿ ಸಂಧ್ಯಾ ವಿವರಿಸಿದರು.</p>.<p>‘ಕೆಂಪು ಬಣ್ಣದ ಕಸದ ಬುಟ್ಟಿಯಲ್ಲಿ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್ಸ್, ಕಾಂಡೋಮ್ ಹಾಗೂ ಇತ್ಯಾದಿ. ಕಪ್ಪು ಬಣ್ಣದ ಬುಟ್ಟಿಯಲ್ಲಿ ಸ್ಪೆಷಲ್ ಕೇರ್ ತ್ಯಾಜ್ಯ, ಪೇಂಟ್ ಡ್ರಮ್ಸ್, ಡಬ್ಬಿಗಳು, ಔಷಧಿ ಬಾಟಲಿ, ಕ್ಯಾನ್, ಬಲ್ಬ್, ಟ್ಯೂಬ್ ಲೈಟ್, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ತ್ಯಾಜ್ಯ, ಅವಧಿ ಮೀರಿದ ಔಷಧಿ, ಹಳೆಯ ಬ್ಯಾಟರಿ, ಬಳಸಿದ ಸೂಜಿ ಅಥವಾ ಸಿರಿಂಜ್, ಬ್ಯಾಂಡೇಜ್ ವಸ್ತುಗಳನ್ನು ಸಂಗ್ರಹಿಸುವ ಮೂಲಕ ನಗರಸಭೆಯೊಂದಿಗೆ ಕೈಜೋಡಿಸಿದಲ್ಲಿ ಸ್ವಚ್ಛ ನಗರವಾಗಿಸಲು ಸುಲಭವಾಗುತ್ತದೆ’ ಎಂದು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-44-797969358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯೂರು: ನಗರಸಭೆ ವತಿಯಿಂದ ಶುಕ್ರವಾರ ಸಾರ್ವಜನಿಕರು, ವ್ಯಾಪಾರೋದ್ಯಮಿಗಳು ಹಾಗೂ ತ್ಯಾಜ್ಯ ಉತ್ಪಾದಕರಿಗೆ ತ್ಯಾಜ್ಯ ವಿಂಗಡಣೆ ಬಗ್ಗೆ ಅರಿವು ಮೂಡಿಸಲಾಯಿತು.</p>.<p>‘ಕೇಂದ್ರ ಅರಣ್ಯ ಸಚಿವಾಲಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಏ 1ರಿಂದ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ ಜಾರಿಗೆ ತಂದಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಗರಸಭೆಯಿಂದ ಆರಂಭಿಸಿದ್ದೇವೆ. ನಗರವನ್ನು ಅಂದವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರೇ ತ್ಯಾಜ್ಯ ವಿಂಗಡಿಸಿ ನಗರಸಭೆಯ ಕಸದ ವಾಹನಕ್ಕೆ ಕೊಡಬೇಕು’ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೌರಾಯುಕ್ತ ಎ. ವಾಸೀಂ ಮನವಿ ಮಾಡಿದರು.</p>.<p>‘ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಲು ನಾಲ್ಕು ವಿಧದ ಬಣ್ಣಗಳಿರುವ ಕಸದ ಬುಟ್ಟಿಗಳನ್ನು ನೀಡುತ್ತಿದ್ದು, ಹಸಿರು ಬಣ್ಣದ ಬುಟ್ಟಿಯಲ್ಲಿ ಅಡಿಗೆ ಮನೆಯ ತ್ಯಾಜ್ಯ, ಆಹಾರ ತ್ಯಾಜ್ಯ, ತರಕಾರಿ, ಮಾಂಸ, ಹಣ್ಣು, ಹೂವು, ಉದ್ಯಾನದ ತ್ಯಾಜ್ಯ ಒಳಗೊಂಡಂತೆ ಕೊಳೆಯುವ ಹಸಿ ತ್ಯಾಜ್ಯ ವಸ್ತುಗಳನ್ನು ಹಾಕಬೇಕು. ನೀಲಿ ಬಣ್ಣದ ಕಸದ ಬುಟ್ಟಿಯಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆಯ ತ್ಯಾಜ್ಯ, ಕಬ್ಬಿಣ, ರಬ್ಬರ್, ಮರದ ತ್ಯಾಜ್ಯಗಳನ್ನು ಹಾಕಬೇಕು’ ಎಂದು ಹಿರಿಯ ಆರೋಗ್ಯ ನಿರೀಕ್ಷಕಿ ಸಂಧ್ಯಾ ವಿವರಿಸಿದರು.</p>.<p>‘ಕೆಂಪು ಬಣ್ಣದ ಕಸದ ಬುಟ್ಟಿಯಲ್ಲಿ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್ಸ್, ಕಾಂಡೋಮ್ ಹಾಗೂ ಇತ್ಯಾದಿ. ಕಪ್ಪು ಬಣ್ಣದ ಬುಟ್ಟಿಯಲ್ಲಿ ಸ್ಪೆಷಲ್ ಕೇರ್ ತ್ಯಾಜ್ಯ, ಪೇಂಟ್ ಡ್ರಮ್ಸ್, ಡಬ್ಬಿಗಳು, ಔಷಧಿ ಬಾಟಲಿ, ಕ್ಯಾನ್, ಬಲ್ಬ್, ಟ್ಯೂಬ್ ಲೈಟ್, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ತ್ಯಾಜ್ಯ, ಅವಧಿ ಮೀರಿದ ಔಷಧಿ, ಹಳೆಯ ಬ್ಯಾಟರಿ, ಬಳಸಿದ ಸೂಜಿ ಅಥವಾ ಸಿರಿಂಜ್, ಬ್ಯಾಂಡೇಜ್ ವಸ್ತುಗಳನ್ನು ಸಂಗ್ರಹಿಸುವ ಮೂಲಕ ನಗರಸಭೆಯೊಂದಿಗೆ ಕೈಜೋಡಿಸಿದಲ್ಲಿ ಸ್ವಚ್ಛ ನಗರವಾಗಿಸಲು ಸುಲಭವಾಗುತ್ತದೆ’ ಎಂದು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-44-797969358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>