<p><strong>ಹಿರಿಯೂರು</strong>: ‘ಡಿ.ಸುಧಾಕರ್ ಅವರು ₹ 45 ಕೋಟಿ ವೆಚ್ಚದಲ್ಲಿ ವಾಣಿವಿಲಾಸ ಅಣೆಕಟ್ಟೆಯಿಂದ ಪೈಪ್ಲೈನ್ ಮೂಲಕ ನಗರಕ್ಕೆ ನೀರು ತರದೇ ಹೋಗಿದ್ದರೆ, ಇಂದಿಗೂ ವೇದಾವತಿ ನದಿಯ ಮೂಲಕ ಬಯಲಿನಲ್ಲಿ ಬರುವ ನೀರನ್ನೇ ಸೇವಿಸ ಬೇಕಿತ್ತು’ ಎಂದು ನಗರಸಭೆ ಮಾಜಿ ಸದಸ್ಯ ಜಿ. ಪ್ರೇಮ್ ಕುಮಾರ್ ಹೇಳಿದರು.</p>.<p>ನಗರದ ಪುಷ್ಪಾಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ವೀನಸ್ ಮಹಲ್ನಲ್ಲಿ ಶುಕ್ರವಾರ ಸುಹಾಸ್ ಸುಧಾಕರ್ ನಡೆಸಿದ ವಾರ್ಡ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.</p>.<p>‘ಬಬ್ಬೂರು ಸಮೀಪ ನಡೆಯುತ್ತಿರುವ ತೋಟಗಾರಿಕೆ ಮಹಾವಿದ್ಯಾಲಯ, ನಗರದ ಬಸ್ ನಿಲ್ದಾಣದ ಬಳಿ ಇರುವ ಬಾಲಕಿಯರ ಪಿಯು ಕಾಲೇಜು, ವಾಣಿ ಸರ್ಕಾರಿ ಹಾಗೂ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿ, ನಗರಕ್ಕೆ ಒಳಚರಂಡಿ ವ್ಯವಸ್ಥೆ ಮಂಜೂರು ಮಾಡಿಸಿ ಟೆಂಡರ್ ಹಂತಕ್ಕೆ ತಂದಿದ್ದಾರೆ. ಉಳಿದಿರುವ ಕೆಲಸಗಳನ್ನು ಮುಂದುವರಿಸಲು ಅವರ ಪುತ್ರ ಸುಹಾಸ್ಗೆ ಕ್ಷೇತ್ರದ ಜನತೆ ತುಂಬು ಮನಸ್ಸಿನಿಂದ ಆಶೀರ್ವದಿಸಬೇಕು’ ಎಂದು ಅವರು ಮನವಿ ಮಾಡಿದರು.</p>.<p>‘ನಮ್ಮ ತಂದೆ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರಿಗೆ ಕೈಜೋಡಿಸಿದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನನ್ನ ಕೈ ಹಿಡಿದು ನಡೆಸಬೇಕು. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನಮ್ಮ ಶಕ್ತಿ. ಇದೇ ಶಕ್ತಿಯೊಂದಿಗೆ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಸುಹಾಸ್ ಸಾರ್ವಜನಿಕರಿಗೆ ಭರವಸೆ ನೀಡಿದರು.</p>.<p>ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿ ಸಾರ್ವಜನಿಕರೊಂದಿಗೆ ಸುಹಾಸ್ ಸಂವಹನ ನಡೆಸಿದರು.</p>.<p>ಮುಖಂಡರಾದ ಈ. ಮಂಜುನಾಥ್, ಈರಲಿಂಗೇಗೌಡ, ಆರ್.ನಾಗೇಂದ್ರನಾಯ್ಕ್, ಘಾಟ್ ರವಿ, ಮಂಜುಳಾ, ಶಿವು, ಜ್ಞಾನೇಶ್ ಕುಮಾರ್, ಗುರುಪ್ರಸಾದ್, ದರ್ಶನ್, ದಾದಾಪೀರ್ ಪಾಲ್ಗೊಂಡಿದ್ದರು.</p>.<p>ಶ್ರದ್ಧಾಂಜಲಿ: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುಧಾಕರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸುಹಾಸ್ ಪಾಲ್ಗೊಂಡಿದ್ದರು. ವಿದ್ಯಾಲಯದ ಸಂಚಾಲಕಿ ಗಾಯತ್ರಿ ಅಕ್ಕ, ಹೂವಿನಹೊಳೆ ಮಹಂತೇಶ್, ನಗರಸಭೆ ಮಾಜಿ ಅಧ್ಯಕ್ಷ ಈ.ಮಂಜುನಾಥ್, ಈರಲಿಂಗೇಗೌಡ, ಮೊದಲ ಮರಿಯಾ, ವಿಶ್ವನಾಥ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-44-1089626084</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು</strong>: ‘ಡಿ.ಸುಧಾಕರ್ ಅವರು ₹ 45 ಕೋಟಿ ವೆಚ್ಚದಲ್ಲಿ ವಾಣಿವಿಲಾಸ ಅಣೆಕಟ್ಟೆಯಿಂದ ಪೈಪ್ಲೈನ್ ಮೂಲಕ ನಗರಕ್ಕೆ ನೀರು ತರದೇ ಹೋಗಿದ್ದರೆ, ಇಂದಿಗೂ ವೇದಾವತಿ ನದಿಯ ಮೂಲಕ ಬಯಲಿನಲ್ಲಿ ಬರುವ ನೀರನ್ನೇ ಸೇವಿಸ ಬೇಕಿತ್ತು’ ಎಂದು ನಗರಸಭೆ ಮಾಜಿ ಸದಸ್ಯ ಜಿ. ಪ್ರೇಮ್ ಕುಮಾರ್ ಹೇಳಿದರು.</p>.<p>ನಗರದ ಪುಷ್ಪಾಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ವೀನಸ್ ಮಹಲ್ನಲ್ಲಿ ಶುಕ್ರವಾರ ಸುಹಾಸ್ ಸುಧಾಕರ್ ನಡೆಸಿದ ವಾರ್ಡ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.</p>.<p>‘ಬಬ್ಬೂರು ಸಮೀಪ ನಡೆಯುತ್ತಿರುವ ತೋಟಗಾರಿಕೆ ಮಹಾವಿದ್ಯಾಲಯ, ನಗರದ ಬಸ್ ನಿಲ್ದಾಣದ ಬಳಿ ಇರುವ ಬಾಲಕಿಯರ ಪಿಯು ಕಾಲೇಜು, ವಾಣಿ ಸರ್ಕಾರಿ ಹಾಗೂ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿ, ನಗರಕ್ಕೆ ಒಳಚರಂಡಿ ವ್ಯವಸ್ಥೆ ಮಂಜೂರು ಮಾಡಿಸಿ ಟೆಂಡರ್ ಹಂತಕ್ಕೆ ತಂದಿದ್ದಾರೆ. ಉಳಿದಿರುವ ಕೆಲಸಗಳನ್ನು ಮುಂದುವರಿಸಲು ಅವರ ಪುತ್ರ ಸುಹಾಸ್ಗೆ ಕ್ಷೇತ್ರದ ಜನತೆ ತುಂಬು ಮನಸ್ಸಿನಿಂದ ಆಶೀರ್ವದಿಸಬೇಕು’ ಎಂದು ಅವರು ಮನವಿ ಮಾಡಿದರು.</p>.<p>‘ನಮ್ಮ ತಂದೆ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರಿಗೆ ಕೈಜೋಡಿಸಿದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನನ್ನ ಕೈ ಹಿಡಿದು ನಡೆಸಬೇಕು. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನಮ್ಮ ಶಕ್ತಿ. ಇದೇ ಶಕ್ತಿಯೊಂದಿಗೆ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಸುಹಾಸ್ ಸಾರ್ವಜನಿಕರಿಗೆ ಭರವಸೆ ನೀಡಿದರು.</p>.<p>ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿ ಸಾರ್ವಜನಿಕರೊಂದಿಗೆ ಸುಹಾಸ್ ಸಂವಹನ ನಡೆಸಿದರು.</p>.<p>ಮುಖಂಡರಾದ ಈ. ಮಂಜುನಾಥ್, ಈರಲಿಂಗೇಗೌಡ, ಆರ್.ನಾಗೇಂದ್ರನಾಯ್ಕ್, ಘಾಟ್ ರವಿ, ಮಂಜುಳಾ, ಶಿವು, ಜ್ಞಾನೇಶ್ ಕುಮಾರ್, ಗುರುಪ್ರಸಾದ್, ದರ್ಶನ್, ದಾದಾಪೀರ್ ಪಾಲ್ಗೊಂಡಿದ್ದರು.</p>.<p>ಶ್ರದ್ಧಾಂಜಲಿ: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುಧಾಕರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸುಹಾಸ್ ಪಾಲ್ಗೊಂಡಿದ್ದರು. ವಿದ್ಯಾಲಯದ ಸಂಚಾಲಕಿ ಗಾಯತ್ರಿ ಅಕ್ಕ, ಹೂವಿನಹೊಳೆ ಮಹಂತೇಶ್, ನಗರಸಭೆ ಮಾಜಿ ಅಧ್ಯಕ್ಷ ಈ.ಮಂಜುನಾಥ್, ಈರಲಿಂಗೇಗೌಡ, ಮೊದಲ ಮರಿಯಾ, ವಿಶ್ವನಾಥ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-44-1089626084</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>