<p>ಹಿರಿಯೂರು: ‘ತಾಲ್ಲೂಕಿನ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜೂನ್ 1 ರಂದು ಸೂರಪ್ಪನಹಟ್ಟಿ ಗೇಟ್ನಿಂದ ಹಿರಿಯೂರಿನ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ನೀರಾವರಿ ಹೋರಾಟಗಾರ ದಿಂಡಾವರ ಚಂದ್ರಗಿರಿ ಹೇಳಿದರು.</p>.<p>ತಾಲ್ಲೂಕಿನ ಕಲ್ಲುವಳ್ಳಿ ಭಾಗದ ಯಲ್ಲದಕೆರೆ, ಕಾಟನಾಯಕನಹಳ್ಳಿ, ಚಿಕ್ಕಬ್ಯಾಡರಹಳ್ಳಿ, ದೊಡ್ಡ ಬ್ಯಾಡರಹಳ್ಳಿ, ದಿಂಡಾವರ ಮೊದಲಾದ ಗ್ರಾಮಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವ ಬಗ್ಗೆ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಕರಪತ್ರ ಹಂಚಿ ಮಾತನಾಡಿದರು.</p>.<p>‘ಕಲ್ಲುವಳ್ಳಿ ಭಾಗದಲ್ಲಿ ಕೆರೆಗಳು ಒಣಗಿದ್ದು, ಅಂತರ್ಜಲ ಕುಸಿದು 1000 ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಈ ಭಾಗದ ಜನ ಉದ್ಯೋಗ ಹುಡುಕಿ ಗುಳೇ ಹೋಗುತ್ತಿದ್ದಾರೆ. ನಮ್ಮ ಕೆರೆಗಳು ತುಂಬಿದರೆ ಮಾತ್ರ ನಮ್ಮ ಹಿರಿಯರು ಬದುಕಿ ಬಾಳಿದ ನಮ್ಮೂರುಗಳಲ್ಲಿ ಬದುಕು ನಡೆಸಲು ಸಾಧ್ಯ. ಹೀಗಾಗಿ ನೀರಿಗಾಗಿ ನಿರ್ಣಾಯಕ ಹೋರಾಟ ನಡೆಸೋಣ’ ಎಂದು ಮನವಿ ಮಾಡಿದರು.</p>.<p>‘ಕಲ್ಲುವಳ್ಳಿ ಭಾಗದ ಗಾಯತ್ರಿ ಅಣೆಕಟ್ಟೆ, ಗಾಂಧಿನಗರ, ಗೌಡನಹಳ್ಳಿ, ದಿಂಡಾವರ, ಉಡುವಳ್ಳಿ, ಚಿಕ್ಕಕೆರೆ, ಬಗ್ಗನಡು, ವಡ್ಡನಹಳ್ಳಿ, ಮಾವಿನಮಡು, ಮಾಳಗೊಂಡನಹಳ್ಳಿ ಸೇರಿದಂತೆ ಗ್ರಾಮದ ಕೆರೆಗಳಿಗೆ ನೀರು ತುಂಬಿಸಿದಲ್ಲಿ ಈ ಭಾಗದ ರೈತರು, ಕೃಷಿ ಕಾರ್ಮಿಕರು, ಪಶುಪಾಲಕರ ಬದುಕು ಹಸನಾಗುತ್ತದೆ. ನೀರು ಬರುವವರೆಗೆ ಹೋರಾಟ ನಡೆಸೋಣ’ ಎಂದರು.</p>.<p>‘ದಿವಂಗತ ಡಿ. ಸುಧಾಕರ್ ಸಚಿವರಾಗಿದ್ದ ಸಮಯದಲ್ಲಿ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುಲು ₹ 265 ಕೋಟಿ ವೆಚ್ಚದ ಯೋಜನೆಗೆ ನೀರಾವರಿ ನಿಗಮದ ಅನುಮೋದನೆ ಪಡೆದಿದ್ದರು. 20 ದಿನಗಳ ಒಳಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಯೋಜನೆಗೆ ಮಂಜೂರಾತಿ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಉಪಚುನಾವಣೆ ಒಳಗೊಂಡು ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-44-1984278300</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯೂರು: ‘ತಾಲ್ಲೂಕಿನ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜೂನ್ 1 ರಂದು ಸೂರಪ್ಪನಹಟ್ಟಿ ಗೇಟ್ನಿಂದ ಹಿರಿಯೂರಿನ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ನೀರಾವರಿ ಹೋರಾಟಗಾರ ದಿಂಡಾವರ ಚಂದ್ರಗಿರಿ ಹೇಳಿದರು.</p>.<p>ತಾಲ್ಲೂಕಿನ ಕಲ್ಲುವಳ್ಳಿ ಭಾಗದ ಯಲ್ಲದಕೆರೆ, ಕಾಟನಾಯಕನಹಳ್ಳಿ, ಚಿಕ್ಕಬ್ಯಾಡರಹಳ್ಳಿ, ದೊಡ್ಡ ಬ್ಯಾಡರಹಳ್ಳಿ, ದಿಂಡಾವರ ಮೊದಲಾದ ಗ್ರಾಮಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವ ಬಗ್ಗೆ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಕರಪತ್ರ ಹಂಚಿ ಮಾತನಾಡಿದರು.</p>.<p>‘ಕಲ್ಲುವಳ್ಳಿ ಭಾಗದಲ್ಲಿ ಕೆರೆಗಳು ಒಣಗಿದ್ದು, ಅಂತರ್ಜಲ ಕುಸಿದು 1000 ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಈ ಭಾಗದ ಜನ ಉದ್ಯೋಗ ಹುಡುಕಿ ಗುಳೇ ಹೋಗುತ್ತಿದ್ದಾರೆ. ನಮ್ಮ ಕೆರೆಗಳು ತುಂಬಿದರೆ ಮಾತ್ರ ನಮ್ಮ ಹಿರಿಯರು ಬದುಕಿ ಬಾಳಿದ ನಮ್ಮೂರುಗಳಲ್ಲಿ ಬದುಕು ನಡೆಸಲು ಸಾಧ್ಯ. ಹೀಗಾಗಿ ನೀರಿಗಾಗಿ ನಿರ್ಣಾಯಕ ಹೋರಾಟ ನಡೆಸೋಣ’ ಎಂದು ಮನವಿ ಮಾಡಿದರು.</p>.<p>‘ಕಲ್ಲುವಳ್ಳಿ ಭಾಗದ ಗಾಯತ್ರಿ ಅಣೆಕಟ್ಟೆ, ಗಾಂಧಿನಗರ, ಗೌಡನಹಳ್ಳಿ, ದಿಂಡಾವರ, ಉಡುವಳ್ಳಿ, ಚಿಕ್ಕಕೆರೆ, ಬಗ್ಗನಡು, ವಡ್ಡನಹಳ್ಳಿ, ಮಾವಿನಮಡು, ಮಾಳಗೊಂಡನಹಳ್ಳಿ ಸೇರಿದಂತೆ ಗ್ರಾಮದ ಕೆರೆಗಳಿಗೆ ನೀರು ತುಂಬಿಸಿದಲ್ಲಿ ಈ ಭಾಗದ ರೈತರು, ಕೃಷಿ ಕಾರ್ಮಿಕರು, ಪಶುಪಾಲಕರ ಬದುಕು ಹಸನಾಗುತ್ತದೆ. ನೀರು ಬರುವವರೆಗೆ ಹೋರಾಟ ನಡೆಸೋಣ’ ಎಂದರು.</p>.<p>‘ದಿವಂಗತ ಡಿ. ಸುಧಾಕರ್ ಸಚಿವರಾಗಿದ್ದ ಸಮಯದಲ್ಲಿ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುಲು ₹ 265 ಕೋಟಿ ವೆಚ್ಚದ ಯೋಜನೆಗೆ ನೀರಾವರಿ ನಿಗಮದ ಅನುಮೋದನೆ ಪಡೆದಿದ್ದರು. 20 ದಿನಗಳ ಒಳಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಯೋಜನೆಗೆ ಮಂಜೂರಾತಿ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಉಪಚುನಾವಣೆ ಒಳಗೊಂಡು ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-44-1984278300</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>