<p><strong>ಹಿರಿಯೂರು:</strong> ತಾಲ್ಲೂಕಿನ ವದ್ದೀಗೆರೆ ಸಿದ್ದೇಶ್ವರಸ್ವಾಮಿ ಬ್ರಹ್ಮರಥೋತ್ಸವ ಮಾರ್ಚ್ 30ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಉತ್ಸವಕ್ಕೆ ಹೋಗಿ ಬರಲು ಹಲವು ರಸ್ತೆಗಳಿದ್ದರೂ, ಇವುಗಳಲ್ಲಿ ಒಂದೂ ನೆಟ್ಟಗಿಲ್ಲ ಎಂದು ಭಕ್ತರು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಜಿಲ್ಲೆಯ ನಾಯಕನಹಟ್ಟಿ ಹೊರತುಪ ಡಿಸಿದರೆ ಲಕ್ಷ ಲೆಕ್ಕದಲ್ಲಿ ಭಕ್ತರು ಸೇರುವ ಬಹುದೊಡ್ಡ ಉತ್ಸವ ವದ್ದೀಗೆರೆಯದ್ದು. ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬರುವ ಕಾರಣ ಸಂಚಾರದಲ್ಲಿ ಉಂಟಾಗುವ ಕಿರಿಕಿರಿ ಹೇಳತೀರದು.</p>.<p>ಹಿರಿಯೂರಿನಿಂದ ಗನ್ನಾಯಕನ ಹಳ್ಳಿ, ಮಲ್ಲಪ್ಪನಹಳ್ಳಿ, ಸಲವಮ್ಮನಹಳ್ಳಿ ಮಾರ್ಗವಾಗಿ ವದ್ದೀಗೆರೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಡಾಂಬರು ಎಷ್ಟು ಕಡೆ ಹೋಗಿದೆ ಎಂಬುದಕ್ಕಿಂತ ಎಲ್ಲಿ ಉಳಿದಿದೆ ಎಂದು ಸುಲಭವಾಗಿ ಹೇಳಬಹುದು ಎನ್ನುತ್ತಾರೆ ಗನ್ನಾಯಕನಹಳ್ಳಿಯ ಯುವ ರೈತ ವಿನಯ್.</p>.<p>‘ಮುಜರಾಯಿ ಇಲಾಖೆ ಮೂಲಕ ಕೋಟಿ ರೂಪಾಯಿ ಲೆಕ್ಕದಲ್ಲಿ ಪ್ರತೀ ವರ್ಷ ಕಾಣಿಕೆ ಹಣ ಪಡೆಯುವ ಸರ್ಕಾರವು ಭಕ್ತರು ಬಂದುಹೋಗಲು ಸರಿಯಾದ ರಸ್ತೆ ಮಾಡದ ಸ್ಥಿತಿಗೆ ತಲುಪಿದೆಯೇ? ಜಿಲ್ಲಾ ಉಸ್ತುವಾರಿ ಸಚಿವರಿಗೆ, ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಮಾಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ. ಬಿಸಿಲಿನಲ್ಲಿ ದೂಳು, ಮಳೆಯಲ್ಲಿ ಕೆಸರಿನ ಮಜ್ಜನ ಮಾಡಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಾಲ್ಲೂಕಿನ ಗುಯಿಲಾಳು ಟೋಲ್ ಸಮೀಪದಿಂದ ಮಲ್ಲಪ್ಪನಹಳ್ಳಿ, ಕರಿಯೋಬನಹಳ್ಳಿ, ಗುಳಗೊಂಡನಹಳ್ಳಿ, ಸಲಬೊಮ್ಮನಹಳ್ಳಿ, ವದ್ದೀಗೆರೆ, ಹರ್ತಿಕೋಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡಾಂಬರಿನ ಗುರುತು ಉಳಿದಿಲ್ಲ. ಕಿತ್ತು ಹೋಗಿರುವ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದಿವೆ. ಅಲ್ಲಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ.</p>.<p>ವದ್ದೀಗೆರೆ ಜಾತ್ರೆಗಂತೂ ರಸ್ತೆ ಸರಿಯಾಗಲಿಲ್ಲ. ಮಳೆಗಾಲ ಆರಂಭವಾಗುವ ಮುನ್ನವಾ ದರೂ ರಸ್ತೆ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರಾದ ದತ್ತಾತ್ರೇಯ, ವೆಂಕಟೇಶ್, ರಂಗನಾಥ, ನಾಗರಾಜ ಒತ್ತಾಯಿಸಿದ್ದಾರೆ.</p>.<p>ಸೊಂಡೆಕೆರೆ–ವದ್ದೀಗೆರೆ ರಸ್ತೆ ನರಕ ಸದೃಶ: ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕುಗಳ ಗಡಿ ಭಾಗದ ಹಳ್ಳಿಗಳ ಜನರು ಸೊಂಡೆಕೆರೆ–ಎಂ.ಡಿ.ಕೋಟೆ ಮೂಲಕ ವದ್ದೀಗೆರೆ ಜಾತ್ರೆಗೆ ಹೋಗಿ ಬರುತ್ತಾರೆ. ರಸ್ತೆಯು ದ್ವಿಚಕ್ರ ವಾಹನ ಓಡಾಡುವಷ್ಟೂ ನೆಟ್ಟಗಿಲ್ಲದ ಕಾರಣಕ್ಕೆ ಸಾಣಿಕೆರೆಗೆ ಹೋಗಿ ಅಲ್ಲಿಂದ ಯರಬಳ್ಳಿ ಮೂಲಕ ವದ್ದೀಗೆರೆಗೆ 10–15 ಕಿ.ಮೀ. ಸುತ್ತು ಹಾಕಿಕೊಂಡು ಬರುತ್ತಿದ್ದಾರೆ. ಎರಡು ವರ್ಷದಿಂದ ರಸ್ತೆ ದುರಸ್ತಿ ಮಾಡಿಸುವಂತೆ ಹೋರಾಟ ನಡೆಸುತ್ತಿದ್ದೇವೆ. ತಾಲ್ಲೂಕು ಆಡಳಿತ ಕಣ್ತೆರೆದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸೊಂಡೆಕೆರೆ ಮಂಜುನಾಥ್.</p>.<p>ಯರಬಳ್ಳಿಯಿಂದ ಕಾಟಪ್ಪನಹಟ್ಟಿ ಮೂಲಕ ವದ್ದೀಗೆರೆಗೆ ಹೋಗುವ ರಸ್ತೆ ಸಿಂಗಲ್ ರಸ್ತೆ ಆಗಿದ್ದು, ದೊಡ್ಡ ವಾಹನಗಳು ಪರಸ್ಪರ ಎದುರಾದರೆ ಜಾಗ ಬಿಟ್ಟುಕೊಡಲು ಪ್ರಯಾಸ ಪಡಬೇಕಾಗುತ್ತದೆ. ಈ ರಸ್ತೆಗೆ ಕಳೆದ ವರ್ಷ ಡಾಂಬರು ಹಾಕಿದ್ದು, ಅಲ್ಲಲ್ಲಿ ಕಿತ್ತು ಹೋಗಿದೆ. ಇದನ್ನು ದ್ವಿಪಥ ರಸ್ತೆಯನ್ನಾಗಿಸಬೇಕು ಎಂದು ಯರಬಳ್ಳಿ ರಾಜಣ್ಣ ಆಗ್ರಹಿಸಿದ್ದಾರೆ.</p>.<p>ತಾಲ್ಲೂಕಿನ ಐಮಂಗಲ ಗ್ರಾಮದಿಂದ ತಾಳವಟ್ಟಿ ಮಾರ್ಗವಾಗಿ ವದ್ದೀಗೆರೆಗೆ ಹೋಗುವ ರಸ್ತೆ ಇದ್ದುದರಲ್ಲಿ ಉತ್ತಮವಾಗಿದೆ. ಎರಡು ವರ್ಷದ ಹಿಂದೆ ಡಾಂಬರು ಹಾಕಿದ್ದು, ಅಲ್ಲಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಗಿದೆ. ಹೀಗಾಗಿ ವದ್ದೀಗೆರೆಗೆ ಹೋಗಿ ಬರಲು ಇರುವ ಐದಾರು ಮಾರ್ಗಗಳಲ್ಲಿ ಇದೇ ವಾಸಿ ಎನ್ನುತ್ತಾರೆ ಭಕ್ತರು.</p>.<p><strong>ಶೀಘ್ರವೇ ರಸ್ತೆಗಳ ದುರಸ್ತಿ ಭರವಸೆ</strong></p><p>‘ವದ್ದೀಗೆರೆ ಜಾತ್ರೆಯ ಒಳಗೆ ಇಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಿಸಲು ಯೋಜನೆ ರೂಪಿಸಲಾಗಿತ್ತು. ವಿಧಾನಸಭೆ ಅಧಿವೇಶನದ ನಂತರ ಸಚಿವ ಡಿ. ಸುಧಾಕರ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಾರಣ ಕಾಮಗಾರಿ ತಡವಾಗಿದೆ. ಅವರು ಗುಣಮುಖರಾಗಿ ಬಂದ ನಂತರ ತಾಲ್ಲೂಕಿನ ಪ್ರಮುಖ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಮಾಡಿಸುತ್ತೇವೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ತಾಲ್ಲೂಕಿನ ವದ್ದೀಗೆರೆ ಸಿದ್ದೇಶ್ವರಸ್ವಾಮಿ ಬ್ರಹ್ಮರಥೋತ್ಸವ ಮಾರ್ಚ್ 30ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಉತ್ಸವಕ್ಕೆ ಹೋಗಿ ಬರಲು ಹಲವು ರಸ್ತೆಗಳಿದ್ದರೂ, ಇವುಗಳಲ್ಲಿ ಒಂದೂ ನೆಟ್ಟಗಿಲ್ಲ ಎಂದು ಭಕ್ತರು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಜಿಲ್ಲೆಯ ನಾಯಕನಹಟ್ಟಿ ಹೊರತುಪ ಡಿಸಿದರೆ ಲಕ್ಷ ಲೆಕ್ಕದಲ್ಲಿ ಭಕ್ತರು ಸೇರುವ ಬಹುದೊಡ್ಡ ಉತ್ಸವ ವದ್ದೀಗೆರೆಯದ್ದು. ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬರುವ ಕಾರಣ ಸಂಚಾರದಲ್ಲಿ ಉಂಟಾಗುವ ಕಿರಿಕಿರಿ ಹೇಳತೀರದು.</p>.<p>ಹಿರಿಯೂರಿನಿಂದ ಗನ್ನಾಯಕನ ಹಳ್ಳಿ, ಮಲ್ಲಪ್ಪನಹಳ್ಳಿ, ಸಲವಮ್ಮನಹಳ್ಳಿ ಮಾರ್ಗವಾಗಿ ವದ್ದೀಗೆರೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಡಾಂಬರು ಎಷ್ಟು ಕಡೆ ಹೋಗಿದೆ ಎಂಬುದಕ್ಕಿಂತ ಎಲ್ಲಿ ಉಳಿದಿದೆ ಎಂದು ಸುಲಭವಾಗಿ ಹೇಳಬಹುದು ಎನ್ನುತ್ತಾರೆ ಗನ್ನಾಯಕನಹಳ್ಳಿಯ ಯುವ ರೈತ ವಿನಯ್.</p>.<p>‘ಮುಜರಾಯಿ ಇಲಾಖೆ ಮೂಲಕ ಕೋಟಿ ರೂಪಾಯಿ ಲೆಕ್ಕದಲ್ಲಿ ಪ್ರತೀ ವರ್ಷ ಕಾಣಿಕೆ ಹಣ ಪಡೆಯುವ ಸರ್ಕಾರವು ಭಕ್ತರು ಬಂದುಹೋಗಲು ಸರಿಯಾದ ರಸ್ತೆ ಮಾಡದ ಸ್ಥಿತಿಗೆ ತಲುಪಿದೆಯೇ? ಜಿಲ್ಲಾ ಉಸ್ತುವಾರಿ ಸಚಿವರಿಗೆ, ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಮಾಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ. ಬಿಸಿಲಿನಲ್ಲಿ ದೂಳು, ಮಳೆಯಲ್ಲಿ ಕೆಸರಿನ ಮಜ್ಜನ ಮಾಡಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಾಲ್ಲೂಕಿನ ಗುಯಿಲಾಳು ಟೋಲ್ ಸಮೀಪದಿಂದ ಮಲ್ಲಪ್ಪನಹಳ್ಳಿ, ಕರಿಯೋಬನಹಳ್ಳಿ, ಗುಳಗೊಂಡನಹಳ್ಳಿ, ಸಲಬೊಮ್ಮನಹಳ್ಳಿ, ವದ್ದೀಗೆರೆ, ಹರ್ತಿಕೋಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡಾಂಬರಿನ ಗುರುತು ಉಳಿದಿಲ್ಲ. ಕಿತ್ತು ಹೋಗಿರುವ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದಿವೆ. ಅಲ್ಲಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ.</p>.<p>ವದ್ದೀಗೆರೆ ಜಾತ್ರೆಗಂತೂ ರಸ್ತೆ ಸರಿಯಾಗಲಿಲ್ಲ. ಮಳೆಗಾಲ ಆರಂಭವಾಗುವ ಮುನ್ನವಾ ದರೂ ರಸ್ತೆ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರಾದ ದತ್ತಾತ್ರೇಯ, ವೆಂಕಟೇಶ್, ರಂಗನಾಥ, ನಾಗರಾಜ ಒತ್ತಾಯಿಸಿದ್ದಾರೆ.</p>.<p>ಸೊಂಡೆಕೆರೆ–ವದ್ದೀಗೆರೆ ರಸ್ತೆ ನರಕ ಸದೃಶ: ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕುಗಳ ಗಡಿ ಭಾಗದ ಹಳ್ಳಿಗಳ ಜನರು ಸೊಂಡೆಕೆರೆ–ಎಂ.ಡಿ.ಕೋಟೆ ಮೂಲಕ ವದ್ದೀಗೆರೆ ಜಾತ್ರೆಗೆ ಹೋಗಿ ಬರುತ್ತಾರೆ. ರಸ್ತೆಯು ದ್ವಿಚಕ್ರ ವಾಹನ ಓಡಾಡುವಷ್ಟೂ ನೆಟ್ಟಗಿಲ್ಲದ ಕಾರಣಕ್ಕೆ ಸಾಣಿಕೆರೆಗೆ ಹೋಗಿ ಅಲ್ಲಿಂದ ಯರಬಳ್ಳಿ ಮೂಲಕ ವದ್ದೀಗೆರೆಗೆ 10–15 ಕಿ.ಮೀ. ಸುತ್ತು ಹಾಕಿಕೊಂಡು ಬರುತ್ತಿದ್ದಾರೆ. ಎರಡು ವರ್ಷದಿಂದ ರಸ್ತೆ ದುರಸ್ತಿ ಮಾಡಿಸುವಂತೆ ಹೋರಾಟ ನಡೆಸುತ್ತಿದ್ದೇವೆ. ತಾಲ್ಲೂಕು ಆಡಳಿತ ಕಣ್ತೆರೆದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸೊಂಡೆಕೆರೆ ಮಂಜುನಾಥ್.</p>.<p>ಯರಬಳ್ಳಿಯಿಂದ ಕಾಟಪ್ಪನಹಟ್ಟಿ ಮೂಲಕ ವದ್ದೀಗೆರೆಗೆ ಹೋಗುವ ರಸ್ತೆ ಸಿಂಗಲ್ ರಸ್ತೆ ಆಗಿದ್ದು, ದೊಡ್ಡ ವಾಹನಗಳು ಪರಸ್ಪರ ಎದುರಾದರೆ ಜಾಗ ಬಿಟ್ಟುಕೊಡಲು ಪ್ರಯಾಸ ಪಡಬೇಕಾಗುತ್ತದೆ. ಈ ರಸ್ತೆಗೆ ಕಳೆದ ವರ್ಷ ಡಾಂಬರು ಹಾಕಿದ್ದು, ಅಲ್ಲಲ್ಲಿ ಕಿತ್ತು ಹೋಗಿದೆ. ಇದನ್ನು ದ್ವಿಪಥ ರಸ್ತೆಯನ್ನಾಗಿಸಬೇಕು ಎಂದು ಯರಬಳ್ಳಿ ರಾಜಣ್ಣ ಆಗ್ರಹಿಸಿದ್ದಾರೆ.</p>.<p>ತಾಲ್ಲೂಕಿನ ಐಮಂಗಲ ಗ್ರಾಮದಿಂದ ತಾಳವಟ್ಟಿ ಮಾರ್ಗವಾಗಿ ವದ್ದೀಗೆರೆಗೆ ಹೋಗುವ ರಸ್ತೆ ಇದ್ದುದರಲ್ಲಿ ಉತ್ತಮವಾಗಿದೆ. ಎರಡು ವರ್ಷದ ಹಿಂದೆ ಡಾಂಬರು ಹಾಕಿದ್ದು, ಅಲ್ಲಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಗಿದೆ. ಹೀಗಾಗಿ ವದ್ದೀಗೆರೆಗೆ ಹೋಗಿ ಬರಲು ಇರುವ ಐದಾರು ಮಾರ್ಗಗಳಲ್ಲಿ ಇದೇ ವಾಸಿ ಎನ್ನುತ್ತಾರೆ ಭಕ್ತರು.</p>.<p><strong>ಶೀಘ್ರವೇ ರಸ್ತೆಗಳ ದುರಸ್ತಿ ಭರವಸೆ</strong></p><p>‘ವದ್ದೀಗೆರೆ ಜಾತ್ರೆಯ ಒಳಗೆ ಇಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಿಸಲು ಯೋಜನೆ ರೂಪಿಸಲಾಗಿತ್ತು. ವಿಧಾನಸಭೆ ಅಧಿವೇಶನದ ನಂತರ ಸಚಿವ ಡಿ. ಸುಧಾಕರ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಾರಣ ಕಾಮಗಾರಿ ತಡವಾಗಿದೆ. ಅವರು ಗುಣಮುಖರಾಗಿ ಬಂದ ನಂತರ ತಾಲ್ಲೂಕಿನ ಪ್ರಮುಖ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಮಾಡಿಸುತ್ತೇವೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>