‘ಗಣಪತಿ ಆರ್ಚ್’ ಎಂದೇ ಪ್ರಸಿದ್ಧವಾಗಿದ್ದ ಈ ಸ್ಥಳ ಪಟ್ಟಣದ ಪ್ರಮುಖ ಭಾಗವಾಗಿತ್ತು. ‘ಪಟ್ಟಣದ ಜನರಿಗೆ ಗಣಪತಿ ಸ್ವಾಗತ ಕಮಾನಿನೊಂದಿಗೆ ಭಾವನಾತ್ಮಕ ಸಂಬಂಧ ಇತ್ತು. ಎಲ್ಲಿದ್ದೀಯ ಎಂದರೆ ‘ಗಣಪತಿ ಆರ್ಚ್’ ಹತ್ತಿರ ಇದ್ದೇನೆ ಎಂದು ಹೇಳುವುದು ಸಾಮಾನ್ಯವಾಗಿತ್ತು. ಸಂಜೆ ವೇಳೆ ಹಿರಿಯರು ಗೋಪುರದ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಕುಳಿತು ಮಸಾಲೆ ಮಂಡಕ್ಕಿ ತಿನ್ನುತ್ತ
ಹರಟೆ ಹೊಡೆಯುವುದು ಸಾಮಾನ್ಯವಾಗಿತ್ತು. ಬೇರೆ ಕಡೆಯಿಂದ ದೇವಸ್ಥಾನಕ್ಕೆ ಬರುವವರು ಈ ಸ್ವಾಗತ ಗೋಪುರ ನೋಡಿದ ತಕ್ಷಣ ದೇವಸ್ಥಾನದ ಮಾರ್ಗ ತಿಳಿಯುತ್ತಿತ್ತು. ಈಗ ಗೋಪುರ ಕೆಡವಿರುವುದರಿಂದ ಬೇಸರ ಆಗಿದೆ’ ಎನ್ನುತ್ತಾರೆ ಹಿರಿಯರಾದ ಶಿವಣ್ಣ.