<p><strong>ಹೊಸದುರ್ಗ</strong>: ‘ಬಡವರ ವಸತಿ ಕನಸು ನನಸು ಮಾಡುವ ಆಶ್ರಯ ಯೋಜನೆಯ ಸದುಪಯೋಗ ಪಡೆದುಕೊಂಡು, ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಸಾಣೇಹಳ್ಳಿಯ ಮಠದ ಆವರಣದಲ್ಲಿ ಮಂಗಳವಾರ ಸ್ವಸ್ತಿ ಗ್ರಾಮದ 25 ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ವಿತರಿಸಿ ಮಾತನಾಡಿದರು.</p>.<p>‘ಜಿಲ್ಲಾ ಪಂಚಾಯಿತಿ ಹಾಗೂ ಮಠದಿಂದ ಗ್ರಾಮದಲ್ಲಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲು ಮುಂದಾಗಿದ್ದಾಗ, ಆರ್ಥಿಕ ನೆರವಿಗಾಗಿ ದಾನಿಗಳ ಅವಶ್ಯಕತೆ ಇತ್ತು. ಆಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಿ.ಟಿ. ಚನ್ನಬಸಪ್ಪ ಅವರ ಗಮನಕ್ಕೆ ತಂದಾಗ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿ ನೆರವು ನೀಡಿದ್ದರು. ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಅರ್ಧ ಭಾಗವನ್ನು ಸ್ವತಃ ಅವರೇ ಭರಿಸಿದರೆ, ಉಳಿದ ವೆಚ್ಚವನ್ನು ಸರ್ಕಾರ ಭರಿಸಿತ್ತು’ ಎಂದರು.</p>.<p>‘ಪ್ರಸ್ತುತ ಈ ಭಾಗದಲ್ಲಿ ನಿವೇಶನದ ಬೆಲೆಯೇ ಅಂದಾಜು ₹ 8 ಲಕ್ಷಗಳಿದ್ದು, ಮನೆ ನಿರ್ಮಾಣ ವೆಚ್ಚ ಸೇರಿ ಒಟ್ಟು ₹ 15 ಲಕ್ಷಕ್ಕೂ ಹೆಚ್ಚು ತಗಲುತ್ತದೆ. ಆದರೆ, ಮಠವು ಹಣಕಾಸಿಗಾಗಿ ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಮಠದ ಹಣ ದುರುಪಯೋಗವಾಗಿದೆ ಎಂಬ ಅಪಕೀರ್ತಿ ಬಾರದಂತೆ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಸ್ವಸ್ತಿ ಗ್ರಾಮಕ್ಕೆ ಅಧಿಕೃತವಾಗಿ ‘ಬಿ.ಟಿ ಚನ್ನಬಸಪ್ಪ ನಗರ’ ಎಂದು ನಾಮಕರಣ ಮಾಡಲು ಸೂಚಿಸಲಾಗಿದೆ’ ಎಂದರು.</p>.<p>‘ಮಠದ ವತಿಯಿಂದ ನೀಡಲಾದ ಈ ಮನೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ’ ಎಂದು ಸೂಚಿಸಿದರು.</p>.<p>ಪಿಡಿಒ ಲಿಂಗರಾಜ್, ಮುಖಂಡರಾದ ಎಸ್.ಆರ್. ಚಂದ್ರಶೇಖರಯ್ಯ, ಲಿಂಗರಾಜ್ ಸೇರಿದಂತೆ ಫಲಾನುಭವಿಗಳಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-44-1198593552</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ</strong>: ‘ಬಡವರ ವಸತಿ ಕನಸು ನನಸು ಮಾಡುವ ಆಶ್ರಯ ಯೋಜನೆಯ ಸದುಪಯೋಗ ಪಡೆದುಕೊಂಡು, ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಸಾಣೇಹಳ್ಳಿಯ ಮಠದ ಆವರಣದಲ್ಲಿ ಮಂಗಳವಾರ ಸ್ವಸ್ತಿ ಗ್ರಾಮದ 25 ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ವಿತರಿಸಿ ಮಾತನಾಡಿದರು.</p>.<p>‘ಜಿಲ್ಲಾ ಪಂಚಾಯಿತಿ ಹಾಗೂ ಮಠದಿಂದ ಗ್ರಾಮದಲ್ಲಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲು ಮುಂದಾಗಿದ್ದಾಗ, ಆರ್ಥಿಕ ನೆರವಿಗಾಗಿ ದಾನಿಗಳ ಅವಶ್ಯಕತೆ ಇತ್ತು. ಆಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಿ.ಟಿ. ಚನ್ನಬಸಪ್ಪ ಅವರ ಗಮನಕ್ಕೆ ತಂದಾಗ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿ ನೆರವು ನೀಡಿದ್ದರು. ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಅರ್ಧ ಭಾಗವನ್ನು ಸ್ವತಃ ಅವರೇ ಭರಿಸಿದರೆ, ಉಳಿದ ವೆಚ್ಚವನ್ನು ಸರ್ಕಾರ ಭರಿಸಿತ್ತು’ ಎಂದರು.</p>.<p>‘ಪ್ರಸ್ತುತ ಈ ಭಾಗದಲ್ಲಿ ನಿವೇಶನದ ಬೆಲೆಯೇ ಅಂದಾಜು ₹ 8 ಲಕ್ಷಗಳಿದ್ದು, ಮನೆ ನಿರ್ಮಾಣ ವೆಚ್ಚ ಸೇರಿ ಒಟ್ಟು ₹ 15 ಲಕ್ಷಕ್ಕೂ ಹೆಚ್ಚು ತಗಲುತ್ತದೆ. ಆದರೆ, ಮಠವು ಹಣಕಾಸಿಗಾಗಿ ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಮಠದ ಹಣ ದುರುಪಯೋಗವಾಗಿದೆ ಎಂಬ ಅಪಕೀರ್ತಿ ಬಾರದಂತೆ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಸ್ವಸ್ತಿ ಗ್ರಾಮಕ್ಕೆ ಅಧಿಕೃತವಾಗಿ ‘ಬಿ.ಟಿ ಚನ್ನಬಸಪ್ಪ ನಗರ’ ಎಂದು ನಾಮಕರಣ ಮಾಡಲು ಸೂಚಿಸಲಾಗಿದೆ’ ಎಂದರು.</p>.<p>‘ಮಠದ ವತಿಯಿಂದ ನೀಡಲಾದ ಈ ಮನೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ’ ಎಂದು ಸೂಚಿಸಿದರು.</p>.<p>ಪಿಡಿಒ ಲಿಂಗರಾಜ್, ಮುಖಂಡರಾದ ಎಸ್.ಆರ್. ಚಂದ್ರಶೇಖರಯ್ಯ, ಲಿಂಗರಾಜ್ ಸೇರಿದಂತೆ ಫಲಾನುಭವಿಗಳಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-44-1198593552</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>