<p>ಹೊಸದುರ್ಗ: ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಶಕ್ತಿ ದೇವತೆ ಕರಿಯಮ್ಮ (ಬೇವಿನಾಳಮ್ಮ) ದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 1ರಿಂದ 8ರದವರೆಗೆ ನಡೆಯಲಿದೆ.</p>.<p>1ರಂದು ಧ್ವಜಾರೋಹಣ, ಭೇರಿತಾಂಡನ, ಅಂಕುರಾರ್ಪಣೆ ಸೇವೆ, ಚಪ್ಪರದ ಸೇವೆ, ಮಧ್ಯಾಹ್ನ ಮಾಡದಕೆರೆ ಗ್ರಾಮದಲ್ಲಿ ಗೌಡರ ವಂಶಸ್ಥರು ಹಾಗೂ ಗ್ರಾಮಸ್ಥರಿಂದ ಮದುವಣಗಿತ್ತಿ ಶಾಸ್ತ್ರ ನಡೆಯಲಿದೆ. ಸಂಜೆ 4 ಗಂಟೆಗೆ ಉಯ್ಯಾಲೆ ಉತ್ಸವ ನೆರವೇರಲಿದೆ.</p>.<p>3ರದಂದು ನಡೆಮುಡಿ, ಜಲಧಿ ಗಂಗಾಸ್ನಾನ, ಮದಾಲ್ಸೆ ಉತ್ಸವ, 4ರಂದು ರಾತ್ರಿ ಹೂವಿನ ಉತ್ಸವ ಜರುಗಲಿವೆ. ಏ.5ರಂದು ಸರಗಂಬಲಿ ಸೇವೆ, ಗದ್ದುಗೆ ಕಂಬಳಿ ಸೇವೆ, ಉಯ್ಯಾಲೆ ಉತ್ಸವ ಆಯೋಜಿಸಲಾಗಿದೆ.</p>.<p>6ರಂದು ಶ್ರೀದೇವಿಯವರ ರಥೋತ್ಸವ ಜರುಗಲಿದೆ. 7ರಂದು ಮಧ್ಯಾಹ್ನ ಸಿಡಿ ಉತ್ಸವ, ಹೂವಿನ ಉತ್ಸವ ನಡೆಯಲಿವೆ. 8 ರಂದು ಬೆಳಿಗ್ಗೆ 10ಕ್ಕೆ ಓಕಳಿ ಸೇವೆ, ಸಂಜೆ 6ಕ್ಕೆ ಅಮ್ಮನ ಉತ್ಸವ ಬೇವಿನಹಳ್ಳಿ ಗ್ರಾಮದಿಂದ ಲಕ್ಕಿಹಳ್ಳಿ ಗ್ರಾಮದ ದಾರಮಾದೇಶ್ವರ ಸ್ವಾಮಿಯ ಸನ್ನಿಧಿಗೆ ಬರಲಿದೆ ಎಂದು ಬೇವಿನಹಳ್ಳಿ ಕರಿಯಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿ ಸೇವಾ ಟ್ರಸ್ಟ್ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-44-1770717659</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸದುರ್ಗ: ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಶಕ್ತಿ ದೇವತೆ ಕರಿಯಮ್ಮ (ಬೇವಿನಾಳಮ್ಮ) ದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 1ರಿಂದ 8ರದವರೆಗೆ ನಡೆಯಲಿದೆ.</p>.<p>1ರಂದು ಧ್ವಜಾರೋಹಣ, ಭೇರಿತಾಂಡನ, ಅಂಕುರಾರ್ಪಣೆ ಸೇವೆ, ಚಪ್ಪರದ ಸೇವೆ, ಮಧ್ಯಾಹ್ನ ಮಾಡದಕೆರೆ ಗ್ರಾಮದಲ್ಲಿ ಗೌಡರ ವಂಶಸ್ಥರು ಹಾಗೂ ಗ್ರಾಮಸ್ಥರಿಂದ ಮದುವಣಗಿತ್ತಿ ಶಾಸ್ತ್ರ ನಡೆಯಲಿದೆ. ಸಂಜೆ 4 ಗಂಟೆಗೆ ಉಯ್ಯಾಲೆ ಉತ್ಸವ ನೆರವೇರಲಿದೆ.</p>.<p>3ರದಂದು ನಡೆಮುಡಿ, ಜಲಧಿ ಗಂಗಾಸ್ನಾನ, ಮದಾಲ್ಸೆ ಉತ್ಸವ, 4ರಂದು ರಾತ್ರಿ ಹೂವಿನ ಉತ್ಸವ ಜರುಗಲಿವೆ. ಏ.5ರಂದು ಸರಗಂಬಲಿ ಸೇವೆ, ಗದ್ದುಗೆ ಕಂಬಳಿ ಸೇವೆ, ಉಯ್ಯಾಲೆ ಉತ್ಸವ ಆಯೋಜಿಸಲಾಗಿದೆ.</p>.<p>6ರಂದು ಶ್ರೀದೇವಿಯವರ ರಥೋತ್ಸವ ಜರುಗಲಿದೆ. 7ರಂದು ಮಧ್ಯಾಹ್ನ ಸಿಡಿ ಉತ್ಸವ, ಹೂವಿನ ಉತ್ಸವ ನಡೆಯಲಿವೆ. 8 ರಂದು ಬೆಳಿಗ್ಗೆ 10ಕ್ಕೆ ಓಕಳಿ ಸೇವೆ, ಸಂಜೆ 6ಕ್ಕೆ ಅಮ್ಮನ ಉತ್ಸವ ಬೇವಿನಹಳ್ಳಿ ಗ್ರಾಮದಿಂದ ಲಕ್ಕಿಹಳ್ಳಿ ಗ್ರಾಮದ ದಾರಮಾದೇಶ್ವರ ಸ್ವಾಮಿಯ ಸನ್ನಿಧಿಗೆ ಬರಲಿದೆ ಎಂದು ಬೇವಿನಹಳ್ಳಿ ಕರಿಯಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿ ಸೇವಾ ಟ್ರಸ್ಟ್ ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-44-1770717659</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>