<p>ಹೊಸದುರ್ಗ: ಇಬ್ಬರಿಗೂ ಮಾತು ಬಾರದು.. ಹುಟ್ಟಿನಿಂದಲೇ ಮೂಗರು. ಆದರೆ ಪ್ರೀತಿ, ಅನುರಾಗಕ್ಕೆ ಮಾತೇಕೇ? ಮೌನ ರಾಗವೇ ಸಂಭಾಷಣೆ ಅಲ್ಲವೇ ಎಂದು ಅಪರೂಪದ ಜೋಡಿಯೊಂದು ಗುರುಹಿರಿಯರ ಸಮ್ಮಖದಲ್ಲಿ ಹಸೆಮಣೆ ಏರಿದೆ.</p>.<p>ಒಂದು ಹೆಣ್ಣಿಗೆ ಒಂದು ಗಂಡು ಎಂದು ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎನ್ನುವುದಕ್ಕೆ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಅದ್ದೂರಿಯಾಗಿ ನಡೆದ ವಿವಾಹವೇ ಸಾಕ್ಷಿಯಾಗಿದೆ.</p>.<p>ಹುಟ್ಟಿನಿಂದಲೇ ಮಾತು ಬಾರದ ಹೊಸದುರ್ಗ ತಾಲ್ಲೂಕಿನ ಹಳೆಮಳಲಿ ಗ್ರಾಮದ ಶೋಭಾ ಮತ್ತು ಪ್ರಕಾಶ್ ದಂಪತಿಯ ಪುತ್ರಿ ಪಿ. ಸಂಗೀತಾ ಹಾಗೂ ಕಡೂರು ತಾಲ್ಲೂಕಿನ ಕಾಮನಕೆರೆ ಗ್ರಾಮದ ಕೋಮಲ ಮತ್ತು ಶಿವಲಿಂಗಪ್ಪ ಅವರ ದ್ವಿತೀಯ ಪುತ್ರ ಕೆ.ಎಸ್. ಅವಿನಾಶ್ ಅವರು ನವ ದಾಂಪತ್ಯಕ್ಕೆಕಾಲಿಟ್ಟಿದ್ದಾರೆ.</p>.<p>ಸಂಗೀತಾ ಮತ್ತು ಅವಿನಾಶ್ ಮೈಸೂರಿನ ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು. ಇಬ್ಬರ ಮನೆಯಲ್ಲೂ ಎರಡು ವರ್ಷಗಳಿಂದ ವಿವಾಹಕ್ಕೆ ವಧು–ವರರನ್ನು ಹುಡುಕುತ್ತಿದ್ದರು. ಹಲವು ಸಂಬಂಧಗಳು ಹುಡುಕಿಕೊಂಡು ಬಂದಿದ್ದರೂ ಒಪ್ಪಿಗೆ ಆಗಿರಲಿಲ್ಲ. ಈ ನಡುವೆ ಇಬ್ಬರಿಗೂ ಮೊದಲೇ ಪರಿಚಯ ಇದ್ದುದ್ದರಿಂದ ಮನೆಯವರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. ಇದು ಅರೆಂಜ್ ಮ್ಯಾರೇಜ್ ಎಂದು ಸಂಗೀತಾ ಅವರ ತಂದೆ ಪ್ರಕಾಶ್ ಹೇಳಿದರು.</p>.<p>ಅವಿನಾಶ್ ಡಿಪ್ಲೊಮಾ ಇನ್ ಜ್ಯೂವೆಲ್ಲರಿ ಡಿಸೈನರ್ ವಿಭಾಗದಲ್ಲಿ ಅಧ್ಯಯನ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಜ್ಯೂವೆಲ್ಲರಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಗೀತಾ ಕೂಡ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-44-336401113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸದುರ್ಗ: ಇಬ್ಬರಿಗೂ ಮಾತು ಬಾರದು.. ಹುಟ್ಟಿನಿಂದಲೇ ಮೂಗರು. ಆದರೆ ಪ್ರೀತಿ, ಅನುರಾಗಕ್ಕೆ ಮಾತೇಕೇ? ಮೌನ ರಾಗವೇ ಸಂಭಾಷಣೆ ಅಲ್ಲವೇ ಎಂದು ಅಪರೂಪದ ಜೋಡಿಯೊಂದು ಗುರುಹಿರಿಯರ ಸಮ್ಮಖದಲ್ಲಿ ಹಸೆಮಣೆ ಏರಿದೆ.</p>.<p>ಒಂದು ಹೆಣ್ಣಿಗೆ ಒಂದು ಗಂಡು ಎಂದು ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎನ್ನುವುದಕ್ಕೆ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಅದ್ದೂರಿಯಾಗಿ ನಡೆದ ವಿವಾಹವೇ ಸಾಕ್ಷಿಯಾಗಿದೆ.</p>.<p>ಹುಟ್ಟಿನಿಂದಲೇ ಮಾತು ಬಾರದ ಹೊಸದುರ್ಗ ತಾಲ್ಲೂಕಿನ ಹಳೆಮಳಲಿ ಗ್ರಾಮದ ಶೋಭಾ ಮತ್ತು ಪ್ರಕಾಶ್ ದಂಪತಿಯ ಪುತ್ರಿ ಪಿ. ಸಂಗೀತಾ ಹಾಗೂ ಕಡೂರು ತಾಲ್ಲೂಕಿನ ಕಾಮನಕೆರೆ ಗ್ರಾಮದ ಕೋಮಲ ಮತ್ತು ಶಿವಲಿಂಗಪ್ಪ ಅವರ ದ್ವಿತೀಯ ಪುತ್ರ ಕೆ.ಎಸ್. ಅವಿನಾಶ್ ಅವರು ನವ ದಾಂಪತ್ಯಕ್ಕೆಕಾಲಿಟ್ಟಿದ್ದಾರೆ.</p>.<p>ಸಂಗೀತಾ ಮತ್ತು ಅವಿನಾಶ್ ಮೈಸೂರಿನ ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು. ಇಬ್ಬರ ಮನೆಯಲ್ಲೂ ಎರಡು ವರ್ಷಗಳಿಂದ ವಿವಾಹಕ್ಕೆ ವಧು–ವರರನ್ನು ಹುಡುಕುತ್ತಿದ್ದರು. ಹಲವು ಸಂಬಂಧಗಳು ಹುಡುಕಿಕೊಂಡು ಬಂದಿದ್ದರೂ ಒಪ್ಪಿಗೆ ಆಗಿರಲಿಲ್ಲ. ಈ ನಡುವೆ ಇಬ್ಬರಿಗೂ ಮೊದಲೇ ಪರಿಚಯ ಇದ್ದುದ್ದರಿಂದ ಮನೆಯವರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. ಇದು ಅರೆಂಜ್ ಮ್ಯಾರೇಜ್ ಎಂದು ಸಂಗೀತಾ ಅವರ ತಂದೆ ಪ್ರಕಾಶ್ ಹೇಳಿದರು.</p>.<p>ಅವಿನಾಶ್ ಡಿಪ್ಲೊಮಾ ಇನ್ ಜ್ಯೂವೆಲ್ಲರಿ ಡಿಸೈನರ್ ವಿಭಾಗದಲ್ಲಿ ಅಧ್ಯಯನ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಜ್ಯೂವೆಲ್ಲರಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಗೀತಾ ಕೂಡ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-44-336401113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>