ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ವರ್ ಸಮಸ್ಯೆ ಬಗ್ಗೆ ಫಲಾನುಭವಿಗಳಿಂದ ಹೆಚ್ಚು ದೂರು ಬರುತ್ತಿದ್ದವು. ಸಕಾಲಕ್ಕೆ ಹಣ ಬಿಡುಗಡೆ ಆಗದಿರುವುದು ಯೋಜನೆ ಅನುಷ್ಠಾನಕ್ಕೆ ತೊಡಕಾಗಿತ್ತು. ಈವರೆಗೆ ಶೇ 62ರಷ್ಟು ಅನುದಾನ ಮಾತ್ರ ಖರ್ಚಾಗಿದೆ. ಇನ್ನೂ ಶೇ 38 ಅನುದಾನ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೂರು ತಿಂಗಳು ಆ್ಯಪ್ ಹಿಂಪಡೆಯಲಾಗಿದೆ’ ಎಂದರು.