‘ದೊರೆಸ್ವಾಮಿ ಅವರ ನಿಧನದಿಂದ ಜನಪರ ಹೋರಾಟ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ. ಸಾಮಾಜಿಕ ಬದ್ಧತೆ, ನಿರಂತರ ಎಚ್ಚರ, ಸಕ್ರಿಯವಾಗಿ ಸಮಕಾಲೀನ ಆಡಳಿತ ಯಂತ್ರದ ಲೋಪಗಳ ವಿರುದ್ಧ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಿದ್ದರು. ನೇರ, ನಿಷ್ಠುರ ವ್ಯಕ್ತಿತ್ವದ ದೊರೆಸ್ವಾಮಿ ನೋಡಿದಾಗಲೆಲ್ಲ ಇವರೇ ನಮ್ಮ ನಡುವಿನ ಗಾಂಧಿ ಎನ್ನುವಂತೆ ಭಾಸವಾಗುತ್ತಿತ್ತು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೆನಪಿಸಿಕೊಂಡಿದ್ದಾರೆ.