ದೊಡ್ಡದಾದ ಈ ಕೆರೆ ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಭರ್ತಿಯಾಗಿ ಕೋಡಿ ಮೂಲಕ ನೀರು ಮುಂದೆ ಹರಿಯಲಿದೆ. ನಂತರ ಚೌಳಹಿರಿಯೂರು ಸಮೀಪದ ಹಳ್ಳದ ಮಾರ್ಗವಾಗಿ ತಾಲ್ಲೂಕಿನ ಗಡಿಗ್ರಾಮವಾದ ಕೊರಟಿಕೆರೆಗೆ ಮಂಗಳವಾರ ನೀರು ತಲುಪಬಹುದು. ನಂತರದಲ್ಲಿ ಕೊರಟಿಕೆರೆ, ಬಲ್ಲಾಳಸಮುದ್ರ, ಕಾರೇಹಳ್ಳಿ ಬ್ಯಾರೇಜ್ಗಳ ಮೂಲಕ ಭದ್ರಾ ನದಿ ನೀರು ಮಂಗಳವಾರ ರಾತ್ರಿ ಅಥವಾ ಬುಧವಾರದ ಹೊತ್ತಿಗೆ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಸೇರುವ ಸೇರಬಹುದು ಎಂಬ ನಿರೀಕ್ಷೆ ರೈತರದ್ದು.