‘ಮಾನವನ ಮಿದುಳಿನಲ್ಲಿ ಆಲೋಚನೆಗಳೆಂಬ ಮೋಡಗಳು ಬಂದು ಹೋಗುತ್ತವೆ. ಆದರೆ, ದುರಾಲೋಚನೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ವೇದನೆಯನ್ನು ನೀಡುವ ದುರಾಲೋಚನೆ, ದುರ್ಭಾವದಿಂದ ದೂರವಿರಲು ಪ್ರಯತ್ನಿಸಬೇಕು. ಮನುಷ್ಯನಿಗೆ ಸ್ವಾರ್ಥ ಭಾವಕ್ಕಿಂತ ಸಾರ್ಥಕ ಭಾವ ಇರಬೇಕು. ನಿರಹಂಕಾರವು ಜೀವನದ ಅಲಂಕಾರವನ್ನು ಹೆಚ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.