ಬಿ.ಜಿ.ಕೆರೆ, ಮೊಳಕಾಲ್ಮುರು, ಎದ್ದಲ ಬೊಮ್ಮಯ್ಯನ ಹಟ್ಟಿ, ರುದ್ರಮ್ಮನಹಳ್ಳಿ, ಮನ್ನೇಕೋಟೆ ಸೇರಿದಂತೆ ಹಲವೆಡೆ ನಿರ್ಮಿಸಿರುವ ಅಂಡರ್ ಪಾಸ್ಗಳಿಂದ ಅನುಕೂಲಕ್ಕಿಂತ ಅನನುಕೂಲ ಹೆಚ್ಚಾಗಿದೆ. ಇದಕ್ಕೆ ನಿರ್ಮಾಣ ಸಮಯದಲ್ಲಿ ಸ್ಥಳೀಯರ ಅಭಿಪ್ರಾಯ ಪರಿಗಣಿಸದಿರುವುದು ಹಾಗೂ ಹಲವು ವರ್ಷಗಳ ಹಿಂದಿನ ವಾಹನ ಸಂಚಾರ ಅಂಕಿ-ಅಂಶಗಳನ್ನು ಇಟ್ಟುಕೊಂಡು ಕ್ರಿಯಾಯೋಜನೆ ಮಾಡಿರುವುದು ಕಾರಣವಾಗಿದೆ ಎಂದು ಸಾರ್ವಜನಿಕರಾದ ಮಲ್ಲೇಶಪ್ಪ, ನಿಂಗರಾಜ್ ದೂರಿದರು.