ಚಿತ್ರದುರ್ಗ: ‘ಒಬ್ಬರು ಸೂಟು–ಬೂಟು ಧರಿಸಿದರೆ, ಬಡವ ಹರಕು ಬಟ್ಟೆ ಧರಿಸುತ್ತಾನೆ. ಆ ಕಾರಣಕ್ಕೆ ಸಮಾನತೆ ಉದ್ದೇಶದಿಂದ ಸಮವಸ್ತ್ರ ನೀತಿ ರೂಪಿಸಲಾಗಿದೆ. ಆದರೆ ಸಮವಸ್ತ್ರ ನೀತಿಯನ್ನು ಧಿಕ್ಕರಿಸಿ ಧರ್ಮದ ಹಿಜಾಬ್ ಧರಿಸುವುದು ಎಷ್ಟರ ಮಟ್ಟಿಗೆ ಸರಿ. ರಾಜ್ಯದ ಕಾಲೇಜುಗಳಲ್ಲಿ ಇಷ್ಟು ದಿನ ಇಲ್ಲದ ವ್ಯವಸ್ಥೆಗೆ ಪ್ರೇರಣೆ ಕೊಟ್ಟವರು ಯಾರು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪ್ರಶ್ನಿಸಿದರು.