ಅಜ್ಜಿಕ್ಯಾತನಹಳ್ಳಿಯ ರಾಕೇಶ್ ಹಾಗೂ ಪರಶುರಾಮ ಸಹೋದರರ ಗುಡಿಸಲು ಮುಂಭಾಗದಲ್ಲಿ ಹುತ್ತ ಬೆಳೆದಿತ್ತು. ಅರಿಶಿನ, ಕುಂಕುಮ ಬಳಸಿ ಇಬ್ಬರು ನಿತ್ಯ ಪೂಜೆ ಮಾಡುತ್ತಿದ್ದರು. ರಾಕೇಶ್ ಮೈಮೇಲೆ ಉಚ್ಚಂಗಿ ಎಲ್ಲಮ್ಮ ದೇವರು ಬರುತ್ತದೆ ಎಂದು ಪರಶುರಾಮ ಗ್ರಾಮಸ್ಥರಲ್ಲಿ ನಂಬಿಸಿದ್ದನು. ದೆವ್ವ, ಭೂತ ಬಿಡಿಸುವುದಾಗಿ ಹೇಳಿಕೊಂಡಿದ್ದರು. ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಕಾಯಿಲೆಗಳು ವಾಸಿಯಾಗುತ್ತವೆ ಎಂದು ಜನರಲ್ಲಿ ಮೂಢನಂಬಿಕೆ ಬಿತ್ತಿದ್ದರು.