ಮಂಗಳವಾರ ದೇವಾಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ನೆರವೇರಿಸಿದ ನಂತರ ವಿಶೇಷವಾಗಿ ಶ್ರೀ ವೀರಗಟ್ಟೇಶ್ವರ, ಶ್ರೀ ವೀರನಾಗಣ್ಣ, ಗಿಡ್ಡಪ್ಪ, ರಂಗನಾಥಸ್ವಾಮಿ, ಚಿತ್ರಲಿಂಗೇಶ್ವರ, ಮೈಲಾರಲಿಂಗೇಶ್ವರ, ಕುಕ್ಕವಾಡೇಶ್ವರಿ, ಮಾರಿಕಾಂಬಾ, ಕರಿಯಮ್ಮ, ದುರ್ಗಾಪರಮೇಶ್ವರಿ ದೇವರ ಉತ್ಸವಮೂರ್ತಿಯನ್ನು ಹೂವಿನಿಂದ ಅಲಂಕರಿಸಿ ಮಡಿಯುಟ್ಟ ಜನರು ತಲೆಮೇಲೆ ಹೊತ್ತು ಬರಿಗಾಲಿನಲ್ಲಿ ನಡೆದು ಕೋಡಿರಂಗವ್ವನಹಳ್ಳಿ ಗ್ರಾಮದ ವೀರಭದ್ರೇಶ್ವರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮರಳಿ ಗ್ರಾಮಕ್ಕೆ ಕರೆತಂದರು.