ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ತೋಟಗಾರಿಕೆ ಮಾಡುವ ಬಗೆಯನ್ನು ತೋಟಗಾರಿಕೆ ಇಲಾಖೆ ತೋರಿಸಿಕೊಟ್ಟಿತು. ಕಡಿಮೆ ನೀರಿನಲ್ಲಿ ಬೆಳೆಯುವ ನಿಂಬೆ, ಕರಿಬೇವು, ಮಾವು, ನುಗ್ಗೆಯಿಂದ ಆಗುವ ಪ್ರಯೋಜನವನ್ನು ರೈತರಿಗೆ ತಿಳಿಸಿಕೊಡಲಾಗುತ್ತಿದೆ. ಬಹುಬೆಳೆ ಪದ್ಧತಿಯ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಡಿಕೆ, ತೆಂಗು ಸಸಿ ನೆಡಲು ಬಳಸುವ ಯಂತ್ರ, ರೇಷ್ಮೆ ಹುಳು ಸಾಕಣೆಗೆ ಬಳಸುವ ಚಾಕಿ, ಸಬ್ಸಿಡಿ ಮಾಹಿತಿ ಫಲಕಗಳು ರೈತರ ಗಮನ ಸೆಳೆದವು.