‘ಕರಿಯಮ್ಮನಹಳ್ಳ ಹರಿದು ಮುದ್ದಾಪುರ ಕೆರೆ ಸೇರುತ್ತಿತ್ತು. ಚೆಕ್ಡ್ಯಾಂ ನಿರ್ಮಿಸಿದ್ದರಿಂದ ಕೆರೆಗೆ ಹರಿದುಹೋಗುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಜಮೀನು ಮುಳುಗಡೆಯಾಗಿದೆ. ಸಾಲ ಮಾಡಿ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದು, ಆತಂಕವಾಗುತ್ತಿದೆ’ ಎಂದು ರೈತ ಕಾಟಲಿಂಗೇಶ್ವರ ಅಳಲು ತೋಡಿಕೊಂಡಿದ್ದಾರೆ.