ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದ ಅಂಚಿನಲ್ಲಿ ಇರುವ ಬೇವಿನಹಳ್ಳಿ, ತಿಮ್ಮಪ್ಪನಹಳ್ಳಿ, ಮಾಳಿಗೆಹಟ್ಟಿ, ಬಂಟನಗವಿ, ಹೊಸೂರು ಭೋವಿಹಟ್ಟಿ, ಐನಹಳ್ಳಿ, ಪೂಜಾರಹಟ್ಟಿ, ಮಲ್ಲಾಪುರ, ಅರೇಹಳ್ಳಿ, ತಿಪ್ಪೇನಹಳ್ಳಿ, ಅಜ್ಜಿಕಂಸಾಗರ ಗ್ರಾಮಗಳಲ್ಲಿ ಮೂರು ತಿಂಗಳಿನಿಂದಲೂ ಎರಡು, ಮೂರು ಚಿರತೆಗಳು ಸಂಜೆ ಹಾಗೂ ಮುಂಜಾನೆ ಹೊತ್ತಿನಲ್ಲಿ ಅಡ್ಡಾಡುತ್ತಿವೆ. ಎರಡು ತಿಂಗಳಲ್ಲಿ 50ಕ್ಕೂ ಅಧಿಕ ಕುರಿ ಹಾಗೂ ಮೇಕೆಗಳನ್ನು ಬಲಿ ತೆಗೆದುಕೊಂಡಿವೆ ಎಂದು ಬೇವಿನಹಳ್ಳಿ ಕುಬೇರಪ್ಪ ತಿಳಿಸಿದರು.