ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ದಾಳಿ: ನಾಲ್ಕು ಕುರಿ ಬಲಿ

ಬೇವಿನಹಳ್ಳಿ ಗ್ರಾಮಸ್ಥರ ಆತಂಕ
Last Updated 11 ಜನವರಿ 2019, 19:24 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿ ಬೇವಿನಹಳ್ಳಿಯ ಕುರಿ ರೊಪ್ಪದಲ್ಲಿ ಗುರುವಾರ ರಾತ್ರಿ ಚಿರತೆ ದಾಳಿಗೆ 4 ಕುರಿಗಳು ಮೃತಪಟ್ಟಿವೆ.

ಬೇವಿನಹಳ್ಳಿ ಗ್ರಾಮದ ಮಂಜಣ್ಣ ಹಾಗೂ ನಾಗರಾಜಪ್ಪ ಅವರಿಗೆ ಕುರಿಗಳು ಸೇರಿವೆ. ₹ 30 ಸಾವಿರ ಮೌಲ್ಯದ 4 ಕುರಿಗಳನ್ನು ಒಂದೇ ರಾತ್ರಿಯಲ್ಲಿ ಚಿರತೆಗೆ ಬಲಿಯಾಗಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದ ಅಂಚಿನಲ್ಲಿ ಇರುವ ಬೇವಿನಹಳ್ಳಿ, ತಿಮ್ಮಪ್ಪನಹಳ್ಳಿ, ಮಾಳಿಗೆಹಟ್ಟಿ, ಬಂಟನಗವಿ, ಹೊಸೂರು ಭೋವಿಹಟ್ಟಿ, ಐನಹಳ್ಳಿ, ಪೂಜಾರಹಟ್ಟಿ, ಮಲ್ಲಾಪುರ, ಅರೇಹಳ್ಳಿ, ತಿಪ್ಪೇನಹಳ್ಳಿ, ಅಜ್ಜಿಕಂಸಾಗರ ಗ್ರಾಮಗಳಲ್ಲಿ ಮೂರು ತಿಂಗಳಿನಿಂದಲೂ ಎರಡು, ಮೂರು ಚಿರತೆಗಳು ಸಂಜೆ ಹಾಗೂ ಮುಂಜಾನೆ ಹೊತ್ತಿನಲ್ಲಿ ಅಡ್ಡಾಡುತ್ತಿವೆ. ಎರಡು ತಿಂಗಳಲ್ಲಿ 50ಕ್ಕೂ ಅಧಿಕ ಕುರಿ ಹಾಗೂ ಮೇಕೆಗಳನ್ನು ಬಲಿ ತೆಗೆದುಕೊಂಡಿವೆ ಎಂದು ಬೇವಿನಹಳ್ಳಿ ಕುಬೇರಪ್ಪ ತಿಳಿಸಿದರು.

ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದಲ್ಲಿ ಆಹಾರ ಸಮಸ್ಯೆ ಉಂಟಾಗಿರುವುದರಿಂದ ಚಿರತೆಗಳು ಹಸಿವಿನ ದಾಹ ನೀಗಿಸಿಕೊಳ್ಳಲು ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯ ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುತ್ತಿವೆ. ಸಂಜೆ ಹಾಗೂ ಬೆಳಿಗ್ಗೆ ಹೊತ್ತಿನಲ್ಲಿ ಜನರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ತೋಟ ಹಾಗೂ ಹೊಲಗಳಿಗೆ ಹೋಗಲು ಆಗುತ್ತಿಲ್ಲ. ಎರಡು ತಿಂಗಳಿನಿಂದ ಚಿರತೆ ಬೇವಿನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸುತ್ತಲೇ ಇರುತ್ತವೆ. ಕುರಿ, ಮೇಕೆ, ಬೆಕ್ಕು ಹಾಗೂ ನಾಯಿಗಳನ್ನು ತಿನ್ನುತ್ತಿವೆ. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಕ್ರಮ ಕೈಗೊಂಡಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ರವೀಂದ್ರ ದೂರಿದರು.

ಗ್ರಾಮದಲ್ಲಿ ಆತಂಕ ಸೃಷ್ಟಿಸಿರುವ ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಮಾಡದಕೆರೆ, ಮತ್ತೋಡು ಹೋಬಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

****

ಅರೇಹಳ್ಳಿ, ತಿಪ್ಪೇನಹಳ್ಳಿಯಲ್ಲಿ ಕಾಣಿಸಿದ್ದ ಚಿರತೆ ಹಿಡಿಯಲು 15 ದಿನದಿಂದ ಬೋನು ಜೋಡಿಸಲಾಯಿತು. ಆದರೆ, ಚಿರತೆ ಸಿಕ್ಕಿಲ್ಲ. ಆ ಬೋನನ್ನು ಬೇವಿನಹಳ್ಳಿಗೆ ಇಡಲಾಗುವುದು.
ಪ್ರದೀಪ್‌ ಪವರ್‌, ವಲಯ ಅರಣ್ಯಾಧಿಕಾರಿ

ಹತ್ತಾರು ಹಳ್ಳಿಯಲ್ಲಿ ಓಡಾಡುತ್ತಿರುವ ಚಿರತೆ ಹಿಡಿಯಲು ಒಂದು ಬೋನು ಇಟ್ಟರೆ ಸಾಲದು, ಹಲವು ಬೋನನಿಗಳನ್ನು ಇಡಬೇಕು.
ಪ್ರೇಮಾ ರವೀಂದ್ರ, ತಾ.ಪಂ. ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT