‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಶುಕ್ರವಾರ ‘ಲಿಂಗಾಯತ ಧರ್ಮ’ ಕುರಿತು ಅವರು ಉಪನ್ಯಾಸ ನೀಡಿದರು.
‘ಲಿಂಗಾಯತರ ದೇವರು ನಿರಾಕಾರವಾದ್ದರಿಂದ ಅಲ್ಲಿ ಮೂರ್ತಿ ಪೂಜೆಗೆ, ಪೂಜಾರಿಗೆ, ದೇವಾಲಯಗಳಿಗೆ ಅವಕಾಶವಿಲ್ಲ. ಲಿಂಗಾತರಾದಂಥವರು ಈ ಆಚರಣೆಯನ್ನು ಅನುಸರಿಸಬಾರದು. ಲಿಂಗಾಯತರಿಗೆ ನರಕವೂ, ಕೈಲಾಸವೂ, ಪುನರ್ಜನ್ಮವೂ ಇಲ್ಲ. ಬದಲಾಗಿ ಲಿಂಗಾಯತರಿಗೆ ಶರಣರು ಹೇಳಿದಂತೆ ದೇವರು ಅವರವರ ಹೃದಯದಲ್ಲಿ ಇದ್ದಾನೆ. ಲಿಂಗಾಯತ ಧರ್ಮ ಜೈನ, ಬುದ್ಧ, ಚಾರ್ವಾಕರ ಹಾಗೆ ನಿರೀಶ್ವರ ಧರ್ಮವಲ್ಲ. ಹಿಂದೂಗಳ ಹಾಗೆ ಸಾಕಾರ ಧರ್ಮವೂ ಅಲ್ಲ. ದೇವರಲ್ಲಿ ನಂಬಿಕೆ ಮತ್ತು ಶರಣರ ತತ್ವಗಳನ್ನು ಆಚರಿಸುವವರು ಲಿಂಗಾಯತರು. ಈ ಧರ್ಮದಲ್ಲಿ ಉಪವಾಸಕ್ಕೆ, ದೇಹ ದಂಡನೆಗೆ, ಪುನರ್ಜನ್ಮಕ್ಕೆ, ತೀರ್ಥಯಾತ್ರೆಗೆ, ನದಿಯಲ್ಲಿ ಮುಳುಗುವ, ಜಪ-ತಪ ಮಾಡುವ, ಪಂಚಾಂಗ, ರಾಹುಕಾಲ, ಯಮಗಂಡಕಾಲ ಮುಂತಾದವುಗಳಿಗೆ ಅವಕಾಶ ಇಲ್ಲ’ ಎಂದು ವಿವರಿಸಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಧರ್ಮ ಎನ್ನುತ್ತಲೇ ಅದಕ್ಕೊಬ್ಬ ಧರ್ಮಗುರು, ಧರ್ಮಗ್ರಂಥ, ಧರ್ಮಕ್ಷೇತ್ರ ಇರಬೇಕೆನ್ನುವುದು ಅಲಿಖಿತ ನಿಯಮವಾಗಿ ಬಿಟ್ಟಿದೆ. ಆದರೆ ಇದಕ್ಕೆ ಅಪವಾದ ಬಸವಾದಿ ಶಿವಶರಣರಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮ. ಲಿಂಗಾಯತ ಒಂದು ಜಾತಿಯಲ್ಲ. ಆಸಕ್ತಿ, ಸಾಧನೆ, ಅನುಭವ, ಅನುಭಾವದಿಂದ ಯಾರು ಬೇಕಾದರೂ ಲಿಂಗಾಯತರಾಗಬಹುದು. ಲಿಂಗಾಯತರಾಗುವುದು ಎಂದರೆ ಜಾತಿಯ ಕರಾಳ ಸುಳಿಯಿಂದ ಹೊರಬಂದು ವಿಶ್ವಮಾನವರಾಗುವುದು. ಲಿಂಗ ಜಾತಿಯ ಸಂಕೇತವಲ್ಲ. ಜ್ಯೋತಿಯ ಪ್ರತೀಕ’ ಎಂದು ಹೇಳಿದರು.