ಇನ್ನೂ ಹಿಟ್ಟಿನ ಗಿರಣಿಗಳ ಬಳಿ ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲೇ ರಾಗಿ, ಗೋಧಿ, ಜೋಳ, ಅಕ್ಕಿ, ಒಣ ಮೆಣಸಿನಕಾಯಿ, ಸಾಂಬಾರ ಪದಾರ್ಥವನ್ನು ಅನೇಕರು ತಂದಿದ್ದರು. ಹೀಗಾಗಿ ಕಡಿಮೆ ಅವಧಿಯಲ್ಲಿ ಎಲ್ಲರಿಗೂ ಹಾಕಿಕೊಡುವುದು ಕಷ್ಟಕರವಾಯಿತು. ಜನಜಂಗುಳಿ ನಿರ್ಮಾಣ ಆಗುವುದನ್ನು ಗಮನಿಸಿದ ಮಾಲೀಕರು ಪರಿಚಯಸ್ಥರು, ಮಾಮೂಲಿ ಗ್ರಾಹಕರಿಗೆ ಮಾತ್ರ ಸೇವೆ ಒದಗಿಸಿದರು.