ಅ. 27ರಂದು ಹರೀಶ್ ವಿದ್ಯಾರ್ಥಿನಿಗೆ ಫೋನ್ ಮಾಡಿ, ‘ಖಾಸಗಿಯವರಿಂದ ನಿಮ್ಮ ಮೊಬೈಲ್ ಪತ್ತೆ ಮಾಡಿಸಿದ್ದೇನೆ. ಅದಕ್ಕೆ ₹ 5,000 ನೀಡಬೇಕು ಎಂದು ತಿಳಿಸಿದ್ದಾರೆ. ‘ಕಡಿಮೆ ಮಾಡಿ’ ಎಂದು ದೂರುದಾರರು ಮನವಿ ಮಾಡಿದರೂ ಒಪ್ಪದೇ ಇದ್ದಾಗ ₹ 3,000 ನೀಡಿ, ಉಳಿದ ₹ 2,000ವನ್ನು ಮೊಬೈಲ್ ಕೊಟ್ಟಾಗ ಕೊಡುತ್ತೇವೆ ಎಂದು ತಿಳಿಸಿ ಹರೀಶ್ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಬೃಂದಾ, ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.