‘ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿ ದೊಡ್ಡದಿದ್ದು, 5 ಜಿಲ್ಲೆಗಳನ್ನು ಒಳಗೊಂಡಿದೆ. ಇದ್ದಕ್ಕಿದ್ದಂತೆ ಚುನಾವಣೆ ಘೋಷಿಸಿದ್ದು, ಮತದಾನದ ದಿನ ಹತ್ತಿರ ಇದೆ. ಎಲ್ಲ ಕಡೆ ಭೇಟಿ ನೀಡಲು ಸಮಯದ ಅಭಾವ ಇದೆ. ಮೊದಲೇ ಪ್ರವಾಸ ಆಯೋಜಿಸಿದ್ದರಿಂದ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮತ್ತೊಮ್ಮೆ ಶಾಸಕರನ್ನು ಕರೆಸಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಅಭ್ಯರ್ಥಿ ಚಿದಾನಂದ ಗೌಡ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.