ಸಿದ್ದರಾಮಯ್ಯ ಅವರು, ‘ಮಡಿವಾಳ, ತಿಗುಳ, ಉಪ್ಪಾರ ಸೇರಿದಂತೆ ಐದು ಜಾತಿಗಳ ಪರಿಸ್ಥಿತಿ ಒಂದೇ ರೀತಿ ಇದೆ. ಇಂತಹ ಜಾತಿಗಳಿಗೆ ‘ಪ್ರವರ್ಗ 2ಎ’ ಸೌಲಭ್ಯ ಸಾಲುತ್ತಿಲ್ಲ ಎಂಬ ಅರಿವೂ ಇದೆ. ಸಮಾನ ಸಮಸ್ಯೆ ಎದುರಿಸುತ್ತಿರುವ ಐದು ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಯಾಗಿದ್ದಾಗ ಚಿಂತನೆ ನಡೆದಿತ್ತು’ ಎಂದು ಹೇಳಿದರು.