ಹಿರಿಯೂರು: ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ತಾಲ್ಲೂಕಿನ ಆನೆಸಿದ್ರಿ ಗೇಟ್ ಸಮೀಪ ಶುಕ್ರವಾರ ಮಾರುತಿ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ಹಾನಗಲ್ ತಾಲ್ಲೂಕಿನ ಸೋಮಸಾಗರ ಗ್ರಾಮದ ಬಸವರಾಜಪ್ಪ (43), ಅವರ ಹೆಂಡತಿ ಸರೋಜಮ್ಮ (35) ಹಾಗೂ ಅವರ ಸಂಬಂಧಿ ಕಲವೀರಪ್ಪ ದೊಡ್ಡಮನಿ (43) ಮೃತಪಟ್ಟವರು.
ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಗಳೂರಿನ ಗಾರ್ಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗಿಗಳಾಗಿದ್ದಅವರು, ಮರಳಿ ಕೆಲಸಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.