ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದಲ್ಲಿ ನಡೆದ ಸಮಾಜೋದ್ಧಾರ್ಮಿಕ ಪರಿವರ್ತನೆಯ ಕಾರ್ಯ 21ನೇ ಶತಮಾನದಲ್ಲೂ ಸಾಧ್ಯವಾಗಿಲ್ಲ. ಇಂದು ಮನುಷ್ಯ ಆಧುನಿಕ ತಂತ್ರಜ್ಞಾನಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಮನುಷ್ಯನಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿದಿಲ್ಲ. ಆಧುನಿಕ ಉಪಕರಣಗಳಿಂದಾಗಿ ಪ್ರತಿ ಮನೆಯ ಗೋಡೆಗೂ ಕಿವಿ, ಕಣ್ಣು, ಮೂಗು ಬಂದು, ಒಬ್ಬರು ಮತ್ತೊಬ್ಬರನ್ನು ಅನುಮಾನದಿಂದ ನೊಡುವ ವಾತಾವರಣ ಸೃಷ್ಟಿಯಾಗಿರುವುದು ದುರದೃಷ್ಟಕರ ಸಂಗತಿ’ ಎಂದು ತಿಳಿಸಿದರು.