ಈಗ ಮಂಜೂರಾಗಿರುವ ಸೀರೆ ಕ್ಲಸ್ಟರ್ ಯೋಜನೆ ರಾಜ್ಯದಲ್ಲಿ ಪ್ರಥಮ ಪ್ರಯತ್ನ ಎನ್ನಲಾಗಿದೆ. ಈ ಮೂಲಕ ಸಣ್ಣ, ಅತಿಸಣ್ಣ ನೇಕಾರರಿಗೆ ಒಂದೇ ಸೂರಿನಡಿ ಕಚ್ಚಾರೇಷ್ಮೆ, ಜರಿ, ಮಗ್ಗ, ಜಾಗ, ವಸತಿ, ಮಾರಾಟ ಸೌಲಭ್ಯ ಕಲ್ಪಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಪೂರ್ಣ ವಿವರ ಇನ್ನೂ ಗೊತ್ತಾಗಬೇಕಿದೆ. ಹಿಂದೆ ನೇಕಾರ ಕಾಲೊನಿಗಳ ಮಾದರಿಯಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಒಂದೇ ವೇದಿಕೆಯಲ್ಲಿ ಸೌಲಭ್ಯ ಕೊಡುವ ಯೋಜನೆ ಇದಾಗಿರಬಹುದು ಎಂದು ಜವಳಿ ಮತ್ತು ಕೈಮಗ್ಗ ಇಲಾಖೆ
ನಿವೃತ್ತ ಉಪ ನಿರ್ದೇಶಕ ಜಿ.ಟಿ. ಕುಮಾರ್ ಹೇಳಿದರು.