‘ಶಾಸಕರು ರಾಜೀನಾಮೆ ನೀಡಲು ಹೋದರೆ ಸ್ಪೀಕರ್ ಅಲ್ಲಿಲ್ಲ. ಇಲ್ಲಿಲ್ಲ ಎಂಬುದಾಗಿ ಹೇಳುವುದು ಸರಿಯಲ್ಲ. ಸ್ಪೀಕರ್ ಸದನದ ಮುಖ್ಯಸ್ಥರಾಗಿದ್ದು, ಎಲ್ಲ ಪಕ್ಷದವರನ್ನೂ ಸಮಾನವಾಗಿ ಕಾಣಬೇಕು. ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದು, ಜುಲೈ 9ರ ಮಂಗಳವಾರದವರೆಗೂ ಕಾಲಾವಕಾಶ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅತೃಪ್ತರ ರಾಜೀನಾಮೆ ಅಂಗೀಕರಿಸಬೇಕು. ಮುಖ್ಯಮಂತ್ರಿ ಸಮಯ ಮುಗಿದು ಹೋಗಿದ್ದು, ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದು ಅವರು ಒತ್ತಾಯಿಸಿದರು.