<p>ಮೊಳಕಾಲ್ಮುರು: ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಸಣ್ಣಪುಟ್ಟ ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ.</p>.<p>ಬಿ.ಜಿ. ಕೆರೆ, ಮುತ್ತಿಗಾರಹಳ್ಳಿ, ಸೂರಮ್ಮನಹಳ್ಳಿ, ಮೊಗಲಹಳ್ಳಿ, ಮ್ಯಾಸರಹಟ್ಟಿ, ದುಪ್ಪಿ, ಮಾರಮ್ಮನಹಳ್ಳಿ, ನೇರ್ಲಹಳ್ಳಿ, ನೇತ್ರನಹಳ್ಳಿ, ಕೊಂಡ್ಲಹಳ್ಳಿ, ಕೋನಸಾಗರ ಸುತ್ತಾಮುತ್ತ ಮಳೆಯಾಗಿದೆ.</p>.<p>ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 14.4 ಮಿ.ಮೀ, ರಾಯಾಪುರ ಕೇಂದ್ರದಲ್ಲಿ 13.6 ಮಿ.ಮೀ, ರಾಂಪುರ ಕೇಂದ್ರದಲ್ಲಿ 6 ಮಿಮೀ ಮತ್ತು ಬಿ.ಜಿ.ಕೆರೆ ಕೇಂದ್ರದಲ್ಲಿ 48 ಮಿ.ಮೀ ಮಳೆ ದಾಖಲಾಗಿದೆ.</p>.<p>ಮಳೆಯಿಂದಾಗಿ ಭಟ್ರಹಳ್ಳಿಯಲ್ಲಿ ಶಬೀನಾ ಅವರಿಗೆ ಸೇರಿದ ಮನೆ, ಸೂರಮ್ಮನಹಳ್ಳಿಯಲ್ಲಿ ಓಬಣ್ಣ ಅವರಿಗೆ ಸೇರಿದ ಮನೆ ಸೇರಿದಂತೆ ಒಟ್ಟು 4 ಮನೆಗಳು ಹಾನಿಗೀಡಾಗಿವೆ. ನೇತ್ರನಹಳ್ಳಿಯಲ್ಲಿ ದೊಡ್ಡ ಹಂಪಮ್ಮ, ಕೋನಸಾಗರದಲ್ಲಿ ಪಾಲಮ್ಮ, ಪದ್ಮಾವತಿ, ನಾಗಭೂಷಣ ಅವರಿಗೆ ಸೇರಿದ ಒಟ್ಟು 8 ಎಕರೆ ಪಪ್ಪಾಯಿ ಬೆಳೆ ಹಾನಿಗೀಡಾಗಿ ಅಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.</p>.<p>15 ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ಸಣ್ಣಪುಟ್ಟ ಹಳ್ಳಗಳು, ಚೆಕ್ ಡ್ಯಾಂಗಳು ತುಂಬಿದ್ದು, ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಿದೆ. ಮೇವು ಬೆಳೆಯಲು ಅನುಕೂಲವಾಗಿರುವ ಪರಿಣಾಮ ಕುರಿ, ಮೇಕೆ, ಜಾನುವಾರು ಸಾಕಣೆದಾರರು ಸಂತಸಗೊಂಡಿದ್ದಾರೆ. ಮೇವಿಗಾಗಿ ಕುರಿ, ಮೇಕೆಗಳ ಜೊತೆ ವಲಸೆ ಹೋಗಿದ್ದ ಅನೇಕರು ಸ್ವಗ್ರಾಮಗಳಿಗೆ ಮರಳುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-44-11352023</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೊಳಕಾಲ್ಮುರು: ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಸಣ್ಣಪುಟ್ಟ ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ.</p>.<p>ಬಿ.ಜಿ. ಕೆರೆ, ಮುತ್ತಿಗಾರಹಳ್ಳಿ, ಸೂರಮ್ಮನಹಳ್ಳಿ, ಮೊಗಲಹಳ್ಳಿ, ಮ್ಯಾಸರಹಟ್ಟಿ, ದುಪ್ಪಿ, ಮಾರಮ್ಮನಹಳ್ಳಿ, ನೇರ್ಲಹಳ್ಳಿ, ನೇತ್ರನಹಳ್ಳಿ, ಕೊಂಡ್ಲಹಳ್ಳಿ, ಕೋನಸಾಗರ ಸುತ್ತಾಮುತ್ತ ಮಳೆಯಾಗಿದೆ.</p>.<p>ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 14.4 ಮಿ.ಮೀ, ರಾಯಾಪುರ ಕೇಂದ್ರದಲ್ಲಿ 13.6 ಮಿ.ಮೀ, ರಾಂಪುರ ಕೇಂದ್ರದಲ್ಲಿ 6 ಮಿಮೀ ಮತ್ತು ಬಿ.ಜಿ.ಕೆರೆ ಕೇಂದ್ರದಲ್ಲಿ 48 ಮಿ.ಮೀ ಮಳೆ ದಾಖಲಾಗಿದೆ.</p>.<p>ಮಳೆಯಿಂದಾಗಿ ಭಟ್ರಹಳ್ಳಿಯಲ್ಲಿ ಶಬೀನಾ ಅವರಿಗೆ ಸೇರಿದ ಮನೆ, ಸೂರಮ್ಮನಹಳ್ಳಿಯಲ್ಲಿ ಓಬಣ್ಣ ಅವರಿಗೆ ಸೇರಿದ ಮನೆ ಸೇರಿದಂತೆ ಒಟ್ಟು 4 ಮನೆಗಳು ಹಾನಿಗೀಡಾಗಿವೆ. ನೇತ್ರನಹಳ್ಳಿಯಲ್ಲಿ ದೊಡ್ಡ ಹಂಪಮ್ಮ, ಕೋನಸಾಗರದಲ್ಲಿ ಪಾಲಮ್ಮ, ಪದ್ಮಾವತಿ, ನಾಗಭೂಷಣ ಅವರಿಗೆ ಸೇರಿದ ಒಟ್ಟು 8 ಎಕರೆ ಪಪ್ಪಾಯಿ ಬೆಳೆ ಹಾನಿಗೀಡಾಗಿ ಅಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.</p>.<p>15 ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ಸಣ್ಣಪುಟ್ಟ ಹಳ್ಳಗಳು, ಚೆಕ್ ಡ್ಯಾಂಗಳು ತುಂಬಿದ್ದು, ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಿದೆ. ಮೇವು ಬೆಳೆಯಲು ಅನುಕೂಲವಾಗಿರುವ ಪರಿಣಾಮ ಕುರಿ, ಮೇಕೆ, ಜಾನುವಾರು ಸಾಕಣೆದಾರರು ಸಂತಸಗೊಂಡಿದ್ದಾರೆ. ಮೇವಿಗಾಗಿ ಕುರಿ, ಮೇಕೆಗಳ ಜೊತೆ ವಲಸೆ ಹೋಗಿದ್ದ ಅನೇಕರು ಸ್ವಗ್ರಾಮಗಳಿಗೆ ಮರಳುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-44-11352023</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>