ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ವ್ಯಕ್ತಿಯ ಭೀಕರ ಹತ್ಯೆ

Last Updated 2 ಮೇ 2021, 5:14 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಬಸ್ ನಿಲ್ದಾಣದ ಎದುರು ಇರುವ ಇಂದಿರಾ ಕ್ಯಾಂಟೀನ್ ಹಿಂಭಾಗ ಶುಕ್ರವಾರ ರಾತ್ರಿ ತಲೆಯ ಮೇಲೆ ಸೈಜುಗಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ನಗರದ ಕೆ.ಎಂ. ಕೊಟ್ಟಿಗೆಯಲ್ಲಿ ವಾಸವಾಗಿರುವ ದಾವಣಗೆರೆ ನಾಗರಾಜಪ್ಪ ಅವರ ಮಗ ಶಿವು (30) ಕೊಲೆಯಾದ ವ್ಯಕ್ತಿ.

‘ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಕ್ಯಾಂಟೀನ್ ಬಂದ್ ಮಾಡಿಕೊಂಡು ಹೋಗುವಾಗ ಕ್ಯಾಂಟೀನ್ ಮುಂದೆ ಶಿವು, ರವಿ ಮತ್ತು ಒಬ್ಬ ಹೆಂಗಸು ಗಲಾಟೆ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ 7.30ಕ್ಕೆ ಕ್ಯಾಂಟೀನ್ ಹಿಂಭಾಗದಲ್ಲಿರುವ ಬಿಆರ್‌ಸಿ ಕಟ್ಟಡದ ಬಳಿ ವ್ಯಕ್ತಿಯ ಮೃತದೇಹ ಬಿದ್ದಿರುವ ಬಗ್ಗೆ ಗ್ರಾಹಕರು ತಿಳಿಸಿದರು. ಅಲ್ಲಿಗೆ ಹೋಗಿ ನೋಡಿದಾಗ ಹಿಂದಿನ ರಾತ್ರಿ ಗಲಾಟೆ ಮಾಡಿಕೊಂಡಿದ್ದ ಶಿವು ಸತ್ತು ಬಿದ್ದಿದ್ದನು. ಅವನ ತಲೆಯ ಪಕ್ಕದಲ್ಲಿ ಒಂದು ಸೈಜುಗಲ್ಲು, ಹಳದಿ ಬಣ್ಣದ ಬಟ್ಟೆಯ ಕೈಚೀಲವಿದ್ದು, ಅಲ್ಲಲ್ಲಿ ರಕ್ತದ ಕಲೆಗಳಾಗಿದ್ದವು’ ಎಂದು ಇಂದಿರಾ ಕ್ಯಾಂಟೀನ್ ನೋಡಿಕೊಳ್ಳುತ್ತಿರುವ ಚೇತನ್ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹತ್ಯೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಂದಗಾವಿ, ಡಿವೈಎಸ್‌ಪಿ ರೋಷನ್ ಜಮೀರ್, ನಗರ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT