‘ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಕ್ಯಾಂಟೀನ್ ಬಂದ್ ಮಾಡಿಕೊಂಡು ಹೋಗುವಾಗ ಕ್ಯಾಂಟೀನ್ ಮುಂದೆ ಶಿವು, ರವಿ ಮತ್ತು ಒಬ್ಬ ಹೆಂಗಸು ಗಲಾಟೆ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ 7.30ಕ್ಕೆ ಕ್ಯಾಂಟೀನ್ ಹಿಂಭಾಗದಲ್ಲಿರುವ ಬಿಆರ್ಸಿ ಕಟ್ಟಡದ ಬಳಿ ವ್ಯಕ್ತಿಯ ಮೃತದೇಹ ಬಿದ್ದಿರುವ ಬಗ್ಗೆ ಗ್ರಾಹಕರು ತಿಳಿಸಿದರು. ಅಲ್ಲಿಗೆ ಹೋಗಿ ನೋಡಿದಾಗ ಹಿಂದಿನ ರಾತ್ರಿ ಗಲಾಟೆ ಮಾಡಿಕೊಂಡಿದ್ದ ಶಿವು ಸತ್ತು ಬಿದ್ದಿದ್ದನು. ಅವನ ತಲೆಯ ಪಕ್ಕದಲ್ಲಿ ಒಂದು ಸೈಜುಗಲ್ಲು, ಹಳದಿ ಬಣ್ಣದ ಬಟ್ಟೆಯ ಕೈಚೀಲವಿದ್ದು, ಅಲ್ಲಲ್ಲಿ ರಕ್ತದ ಕಲೆಗಳಾಗಿದ್ದವು’ ಎಂದು ಇಂದಿರಾ ಕ್ಯಾಂಟೀನ್ ನೋಡಿಕೊಳ್ಳುತ್ತಿರುವ ಚೇತನ್ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.