<p><strong>ಚಿತ್ರದುರ್ಗ</strong>: ‘ಪ್ರಸ್ತುತ ದಿನಮಾನದಲ್ಲಿ ಮೊಬೈಲ್ ಎಂಬುದು ವ್ಯಸನವಾಗಿ ಪರಿವರ್ತನೆಯಾಗಿದೆ. ಇದರಿಂದ ಹೊರಬಂದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ’ ಎಂದು ಹೊಳಲ್ಕೆರೆ ಒಂಟಿಕಂಬದ ಮಠದ ಉಸ್ತುವಾರಿ ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಕುರುಬ ಗೊಲ್ಲಾಳೇಶ್ವರ ಶರಣೋತ್ಸವದಲ್ಲಿ ಮಾತನಾಡಿದ ಅವರು, ‘ಯುವ ತಲೆಮಾರು ಹಲವು ವ್ಯಸನಗಳಿಗೆ ಒಳಗಾಗುತ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್ ಹಂಬಲ ಅತಿಯಾಗಿ ಕಾಡುತ್ತಿದೆ’ ಎಂದರು.</p>.<p>‘ಕುರಿ ಕಾಯುವ ಹುಡುಗ ಕುರಿಯ ಹಿಕ್ಕೆಯಲ್ಲಿ ಶಿವಲಿಂಗ ಕಾಣುವಂಥ ಅಗಾಧ ನಂಬಿಕೆಯನ್ನು ಹೊಂದಿ ತನ್ನ ಕಾಯಕದ ಮೂಲಕ ದೇವರನ್ನು ಕಂಡು ಶಿವಶರಣ ಗೊಲ್ಲಾಳೇಶ್ವರರು ಆದರು. ಇವರು ಇಂದಿನ ತಲೆಮಾರಿಗೆ ಮಾದರಿಯಾಗಿದ್ದಾರೆ’ ಎಂದು ತಿಳಿಸಿದರು.</p>.<p>‘12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಸಮಾಜೋಧಾರ್ಮಿಕ ಚಳವಳಿ ದೇಶದಲ್ಲಿ ಜನಾಕರ್ಷಣೆಗೆ ಒಳಗಾಗಿತ್ತು. ವರ್ಣ, ವರ್ಗ, ಜಾತಿ, ಲಿಂಗಗಳ ವ್ಯವಸ್ಥೆಯ ಮಿತಿಯನ್ನು ಮೀರಿ ರಾಜ-ಮಹಾರಾಜರು, ಕವಿಗಳು, ಕಲಾವಿದರು, ಸಾಧಕರು, ಸಂತರು ಕಲ್ಯಾಣದ ಕಡೆಗೆ ಆಕರ್ಷಿತರಾದರು’ ಎಂದು ಹೇಳಿದರು.</p>.<p>‘ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಂಡರು. ತಮ್ಮ ಆಲೋಚನೆಗಳನ್ನು ವಿವೇಚನೆಯ ಓರೆಗೆ ಹಚ್ಚಿದರು. ಒಬ್ಬರು ಮತ್ತೊಬ್ಬರಿಂದ ಪ್ರಭಾವಿತರಾದರು. ಅಲಕ್ಷಿತರು, ಅನಕ್ಷರಸ್ಥರು ವಿಚಾರ ಕ್ರಾಂತಿಯ ಪ್ರಭಾವಕ್ಕೊಳಗಾದರು. ಅಂಥವರಲ್ಲಿ ಕುರಿ ಕಾಯುವ ಹುಡುಗ ಕುರುಬರ ಗೊಲ್ಲಾಳೇಶ್ವರರು ಒಬ್ಬರಾಗಿದ್ದಾರೆ’ ಎಂದರು.</p>.<p>ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಜಿ.ರಾಜೇಶ್, ಜಮುರಾ ಕಲಾವಿದ ಉಮೇಶ್ ಪತ್ತಾರ್, ಉಪನ್ಯಾಸಕ ಪಿ.ಉಮಾಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ಪ್ರಸ್ತುತ ದಿನಮಾನದಲ್ಲಿ ಮೊಬೈಲ್ ಎಂಬುದು ವ್ಯಸನವಾಗಿ ಪರಿವರ್ತನೆಯಾಗಿದೆ. ಇದರಿಂದ ಹೊರಬಂದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ’ ಎಂದು ಹೊಳಲ್ಕೆರೆ ಒಂಟಿಕಂಬದ ಮಠದ ಉಸ್ತುವಾರಿ ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಕುರುಬ ಗೊಲ್ಲಾಳೇಶ್ವರ ಶರಣೋತ್ಸವದಲ್ಲಿ ಮಾತನಾಡಿದ ಅವರು, ‘ಯುವ ತಲೆಮಾರು ಹಲವು ವ್ಯಸನಗಳಿಗೆ ಒಳಗಾಗುತ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್ ಹಂಬಲ ಅತಿಯಾಗಿ ಕಾಡುತ್ತಿದೆ’ ಎಂದರು.</p>.<p>‘ಕುರಿ ಕಾಯುವ ಹುಡುಗ ಕುರಿಯ ಹಿಕ್ಕೆಯಲ್ಲಿ ಶಿವಲಿಂಗ ಕಾಣುವಂಥ ಅಗಾಧ ನಂಬಿಕೆಯನ್ನು ಹೊಂದಿ ತನ್ನ ಕಾಯಕದ ಮೂಲಕ ದೇವರನ್ನು ಕಂಡು ಶಿವಶರಣ ಗೊಲ್ಲಾಳೇಶ್ವರರು ಆದರು. ಇವರು ಇಂದಿನ ತಲೆಮಾರಿಗೆ ಮಾದರಿಯಾಗಿದ್ದಾರೆ’ ಎಂದು ತಿಳಿಸಿದರು.</p>.<p>‘12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಸಮಾಜೋಧಾರ್ಮಿಕ ಚಳವಳಿ ದೇಶದಲ್ಲಿ ಜನಾಕರ್ಷಣೆಗೆ ಒಳಗಾಗಿತ್ತು. ವರ್ಣ, ವರ್ಗ, ಜಾತಿ, ಲಿಂಗಗಳ ವ್ಯವಸ್ಥೆಯ ಮಿತಿಯನ್ನು ಮೀರಿ ರಾಜ-ಮಹಾರಾಜರು, ಕವಿಗಳು, ಕಲಾವಿದರು, ಸಾಧಕರು, ಸಂತರು ಕಲ್ಯಾಣದ ಕಡೆಗೆ ಆಕರ್ಷಿತರಾದರು’ ಎಂದು ಹೇಳಿದರು.</p>.<p>‘ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಂಡರು. ತಮ್ಮ ಆಲೋಚನೆಗಳನ್ನು ವಿವೇಚನೆಯ ಓರೆಗೆ ಹಚ್ಚಿದರು. ಒಬ್ಬರು ಮತ್ತೊಬ್ಬರಿಂದ ಪ್ರಭಾವಿತರಾದರು. ಅಲಕ್ಷಿತರು, ಅನಕ್ಷರಸ್ಥರು ವಿಚಾರ ಕ್ರಾಂತಿಯ ಪ್ರಭಾವಕ್ಕೊಳಗಾದರು. ಅಂಥವರಲ್ಲಿ ಕುರಿ ಕಾಯುವ ಹುಡುಗ ಕುರುಬರ ಗೊಲ್ಲಾಳೇಶ್ವರರು ಒಬ್ಬರಾಗಿದ್ದಾರೆ’ ಎಂದರು.</p>.<p>ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಜಿ.ರಾಜೇಶ್, ಜಮುರಾ ಕಲಾವಿದ ಉಮೇಶ್ ಪತ್ತಾರ್, ಉಪನ್ಯಾಸಕ ಪಿ.ಉಮಾಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>