ಮಠದ ಪೀಠಾಧ್ಯಕ್ಷರು ಚಿನ್ನದ ಕಿರೀಟ, ಬಂಗಾರದ ಪಾದುಕೆ ಹಾಗೂ ಆಭರಣ ಧರಿಸಿ ರತ್ನಖಚಿತ ಸಿಂಹಾಸನದ ಪೀಠಾರೋಹಣ ಮಾಡುವುದು ವಾಡಿಕೆಯಾಗಿತ್ತು. ಈ ಆಡಂಬರದ ಆಚರಣೆಯನ್ನು ಸರಳೀಕರಿಸಿದ್ದ ಶಿವಮೂರ್ತಿ ಮುರುಘಾ ಶರಣರು ರುದ್ರಾಕ್ಷಿ ಕಿರೀಟ, ಮರದ ಪಾದುಕೆ ಧರಿಸಿ ಮರದ ಆಸನದ ಮೇಲೆ ಕುಳಿತುಕೊಳ್ಳುವ ಪರಂಪರೆ ಆರಂಭಿಸಿದ್ದರು. ಪೀಠದ ಮೇಲೆ ಭಾವಚಿತ್ರ ಇಟ್ಟು ಕೈಂಕರ್ಯ ಪೂರೈಸಿದ್ದು ಇದೇ ಮೊದಲು.