‘ಬಸವಾದಿ ಶರಣರು ಸಂಸಾರವನ್ನು ತ್ಯಾಜ್ಯವೆಂದು ಭಾವಿಸಲಿಲ್ಲ. ಬದಲಿಗೆ ಸಂಸಾರವೂ ಪೂಜ್ಯವೆಂದು ಭಾವಿಸಿದ್ದರು. ಶುದ್ಧರಾದವರು ಬದ್ಧರಾಗುತ್ತಾರೆ ಎಂಬುದು ಅವರ ನಂಬಿಕೆ. ಶುದ್ಧತೆ ಮತ್ತು ಬದ್ಧತೆ ಇದ್ದಾಗ ಪ್ರಬುದ್ಧತೆ ಬರುತ್ತದೆ. ಶುದ್ಧೀಕರಣವೆಂದರೆ, ಶರೀರ, ಇಂದ್ರಿಯ ಮತ್ತು ಬುದ್ಧಿಯ ವಿಕಾಸ. ಶುದ್ಧೀಕರಣಕ್ಕೆ ಬಳಸುವ ಏಣಿಯೇ ಶಿವಯೋಗ’ ಎಂದು ಹೇಳಿದರು.