ಚಿತ್ರದುರ್ಗ: ದೇಶದ ಸುತ್ತ ಶತ್ರುಗಳಿದ್ದು, ಭದ್ರತೆ ಪ್ರಾಮುಖ್ಯತೆ ಪಡೆದಿದೆ. ಶತ್ರುಗಳಿಂದ ದೇಶವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರಂತಹ ಬಲಿಷ್ಠ ನಾಯಕರು ಬೇಕಿದೆ ಎಂದು ಶಿವಮೂರ್ತಿ ಮುರುಘಾ ಶರಣರು ಬುಧವಾರ ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮುರುಘಾ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಶರಣರು ಸುದ್ದಿಗಾರರೊಂದಿಗೆ ಮಾತನಾಡಿದರು.
ನರೇಂದ್ರ ಮೋದಿ ಅವರು ಪರಿಶ್ರಮದಿಂದ ಮೇಲೆ ಬಂದಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳಲ್ಲಿಯೂ ಆ ರೀತಿಯ ಬಲಿಷ್ಠ ನಾಯಕ ಎದ್ದು ಬರಲಿ ಎಂದು ಹೇಳಿದರು.
‘ನಾಡಿನಲ್ಲಿ ಕೋಮುದಳ್ಳುರಿ ತಾಂಡವ ಆಡುತ್ತಿದೆ. ನಾವೆಲ್ಲರೂ ಶಾಂತಿಪ್ರಿಯರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶ್ವಾಸನೆ ನೀಡಿವೆ. ಶಾಂತಿ, ಸಾಮರಸ್ಯದ ಕಡೆಗೆ ಎಲ್ಲರ ನಡೆ ಇರಬೇಕು’ ಎಂದು ಹೇಳಿದರು.