<p><strong>ನಾಯಕನಹಟ್ಟಿ:</strong> ಪಟ್ಟಣದ ಹಟ್ಟಿ ಮಲ್ಲಪ್ಪನಾಯಕ ವೃತ್ತದ ಬಳಿ ಇರುವ ತಿಪ್ಪೇಸ್ವಾಮಿ ಹೋಟೆಲ್ ಮುಂಭಾಗದಲ್ಲಿ ಬುಧವಾರ ಸಂಜೆ ವ್ಯಕ್ತಿಯೊಬ್ಬರು ತಮ್ಮ ಬೈಕ್ನ ಬ್ಯಾಗ್ನಲ್ಲಿ ಇಟ್ಟಿದ್ದ ₹ 4 ಲಕ್ಷವನ್ನು ಕಳ್ಳನೊಬ್ಬ ದೋಚಿ ಪರಾರಿಯಾಗಿದ್ದಾನೆ.</p>.<p>ಮುಷ್ಠಲಗುಮ್ಮಿ ವೀರಭದ್ರೇಶ್ವರ ಸ್ವಾಮಿ ಪ್ರೌಢಶಾಲೆಯ ಶಿಕ್ಷಕ, ಅಬ್ಬೇನಹಳ್ಳಿ ಗ್ರಾಮದ ಸಿ.ಎನ್. ಉಮೇಶ್ ಹಣ ಕಳೆದುಕೊಂಡವರು.</p>.<p>ಉಮೇಶ್ ಅವರ ಅಕ್ಕನ ಮಗನ ಮದುವೆ ಖರ್ಚಿಗಾಗಿ ಬುಧವಾರ ಬೆಳಿಗ್ಗೆ ಬ್ಯಾಂಕ್ನಿಂದ ₹ 4 ಲಕ್ಷವನ್ನು ಬಿಡಿಸಿಕೊಂಡು ಬೈಕ್ನ ಸೈಡ್ ಬ್ಯಾಗ್ನಲ್ಲಿ ಇಟ್ಟಿದ್ದಾರೆ. ನಂತರ ಹಟ್ಟಿ ಮಲ್ಲಪ್ಪನಾಯಕ ವೃತದಲ್ಲಿರುವ ತಿಪ್ಪೇಸ್ವಾಮಿ ಹೋಟೆಲ್ಗೆ ಬಂದಿದ್ದಾರೆ. ಹೋಟೆಲ್ ಹೊರಗಡೆ ಬೈಕ್ ನಿಲ್ಲಿಸಿ ಉಪಾಹಾರ ಸೇವಿಸಿ ಮರಳಿ ಬಂದು ಬೈಕ್ ನೋಡಿದಾಗ ಹಣ ಇರುವ ಚೀಲ ಕಾಣೆಯಾಗಿತ್ತು.</p>.<p>ನಾಯಕನ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಪಿಎಸ್ಐ ಜಿ. ಪಾಂಡುರಂಗ ಪಟ್ಟಣದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳನ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕನಹಟ್ಟಿ:</strong> ಪಟ್ಟಣದ ಹಟ್ಟಿ ಮಲ್ಲಪ್ಪನಾಯಕ ವೃತ್ತದ ಬಳಿ ಇರುವ ತಿಪ್ಪೇಸ್ವಾಮಿ ಹೋಟೆಲ್ ಮುಂಭಾಗದಲ್ಲಿ ಬುಧವಾರ ಸಂಜೆ ವ್ಯಕ್ತಿಯೊಬ್ಬರು ತಮ್ಮ ಬೈಕ್ನ ಬ್ಯಾಗ್ನಲ್ಲಿ ಇಟ್ಟಿದ್ದ ₹ 4 ಲಕ್ಷವನ್ನು ಕಳ್ಳನೊಬ್ಬ ದೋಚಿ ಪರಾರಿಯಾಗಿದ್ದಾನೆ.</p>.<p>ಮುಷ್ಠಲಗುಮ್ಮಿ ವೀರಭದ್ರೇಶ್ವರ ಸ್ವಾಮಿ ಪ್ರೌಢಶಾಲೆಯ ಶಿಕ್ಷಕ, ಅಬ್ಬೇನಹಳ್ಳಿ ಗ್ರಾಮದ ಸಿ.ಎನ್. ಉಮೇಶ್ ಹಣ ಕಳೆದುಕೊಂಡವರು.</p>.<p>ಉಮೇಶ್ ಅವರ ಅಕ್ಕನ ಮಗನ ಮದುವೆ ಖರ್ಚಿಗಾಗಿ ಬುಧವಾರ ಬೆಳಿಗ್ಗೆ ಬ್ಯಾಂಕ್ನಿಂದ ₹ 4 ಲಕ್ಷವನ್ನು ಬಿಡಿಸಿಕೊಂಡು ಬೈಕ್ನ ಸೈಡ್ ಬ್ಯಾಗ್ನಲ್ಲಿ ಇಟ್ಟಿದ್ದಾರೆ. ನಂತರ ಹಟ್ಟಿ ಮಲ್ಲಪ್ಪನಾಯಕ ವೃತದಲ್ಲಿರುವ ತಿಪ್ಪೇಸ್ವಾಮಿ ಹೋಟೆಲ್ಗೆ ಬಂದಿದ್ದಾರೆ. ಹೋಟೆಲ್ ಹೊರಗಡೆ ಬೈಕ್ ನಿಲ್ಲಿಸಿ ಉಪಾಹಾರ ಸೇವಿಸಿ ಮರಳಿ ಬಂದು ಬೈಕ್ ನೋಡಿದಾಗ ಹಣ ಇರುವ ಚೀಲ ಕಾಣೆಯಾಗಿತ್ತು.</p>.<p>ನಾಯಕನ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಪಿಎಸ್ಐ ಜಿ. ಪಾಂಡುರಂಗ ಪಟ್ಟಣದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳನ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>