<p><strong>ನಾಯಕನಹಟ್ಟಿ:</strong> ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ, ಅವಧೂತ ಪರಂಪರೆಯ ಸಂತ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.</p>.<p>ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ನಾಯಕ, ಕಾಯಕವೇ ಕೈಲಾಸವೆಂಬ ತತ್ವವನ್ನು ಅಕ್ಷರಶಃ ಪಾಲಿಸಿ, ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವವನ್ನು ಸಾರಿದ ಕಾಯಕ ಯೋಗಿಯ ಜಾತ್ರೆಯು ಶುಕ್ರವಾರ ಮಧ್ಯಾಹ್ನ ಸಕಲ ಶಾಸ್ತ್ರ ಸಂಪ್ರದಾಯಗಳೊಂದಿಗೆ ನಡೆಯಿತು.</p>.<p>ಜಾತ್ರೆಯಲ್ಲಿ ಸೇರಿದ್ದ ಲಕ್ಷಾಂತರ ಭಕ್ತಸಾಗರದ ನಡುವೆ ಏಳು ಬಣ್ಣಗಳ ಬಾವುಟಗಳಿಂದ ಅಲಂಕಾರಗೊಂಡ 5 ಚಕ್ರದ ಮಹಾರಥದಲ್ಲಿ ಮಧ್ಯಾಹ್ನ 3 ಗಂಟೆಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೈವಸ್ಥರ ಸಮ್ಮುಖದಲ್ಲಿ ಮುಕ್ತಿಬಾವುಟ ಹರಾಜು ನಡೆಸಿ ಮಹಾಮಂಗಳಾರತಿ ಮಾಡಲಾಯಿತು. ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ರಾಜಗಾಂಭೀರ್ಯದಿಂದ ಪಾದಗಟ್ಟೆಯ ಕಡೆಗೆ ರಥ ಸಾಗಿತು.</p>.<p>ಬೃಹತ್ ಗಾತ್ರದ ಅಂದಾಜು 40 ಮೀಟರ್ ಉದ್ದದ ಎರಡು ಮಿಣಿ (ಹಗ್ಗ) ಹಿಡಿದು ಭಕ್ತರು ಮಹಾರಥವನ್ನು ಎಳೆದರು. ಬಾಳೆಹಣ್ಣು, ಚೂರುಬೆಲ್ಲ, ಮೆಣಸು, ದವನದ ಹೂವನ್ನು ರಥದತ್ತ ತೂರಿದರು. ಸಂಜೆ 5.45ಕ್ಕೆ ಮಹಾರಥವು ಪಾದಗಟ್ಟೆ ತಲುಪಿದ ಬಳಿಕ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ಅರ್ಚಕರು ದೇವರನ್ನು ರಥದಲ್ಲಿ ಹಿಮ್ಮುಖವಾಗಿ ತಿರುಗಿಸಿ ಪ್ರತಿಷ್ಠಾಪಿಸಿದರು. ಬಂದ ಮಾರ್ಗವಾಗಿ ಸಾಗಿದ ರಥ, ಸ್ವಸ್ಥಾನ ತಲುಪಿತು. ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.</p>.<p><strong>ಜನಪದ ಕಲಾಮೇಳಗಳ ಮೆರುಗು: </strong>ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಜನಪದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಿದವು. ಡೊಳ್ಳು, ಕಂಸಾಳೆ, ವೀರಗಾಸೆ, ತಮಟೆ, ಉರುಮೆ, ಚೌಡಿಕೆ, ಗೊರವರು, ಕರಡೆವಾದ್ಯ, ನಂದಿಧ್ವಜ, ನಂದಿಕೋಲು ಕುಣಿತಗಳು ನೊಡುಗರ ಗಮನಸೆಳೆದವು.</p>.<p><strong>ಸಾಧು–ಸಂತರ ಸಮಾಗಮ: </strong>ಇದು ಮೂಲತಃ ಸಾಧುಸಂತರ ಜಾತ್ರೆಯಾಗಿದ್ದು, ವಿವಿಧ ಜಿಲ್ಲೆಗಳ ಸಾಧು ಸಂತರು ಹೊರಮಠದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಮಹಿಳೆ ಹಾಗೂ ಪುರುಷ ಸನ್ಯಾಸಿಗಳು, ಸಾಧುಗಳು ವಿವಿಧ ಪೂಜೆಗಳನ್ನು ಮಾಡಿ ಹಾಡು ಭಜನೆಗಳಿಂದ ದೇವರನ್ನು ಕೊಂಡಾಡಿದರು. ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿದರು.</p>.<p><strong>ಬಿಸಿಲಿನ ತಾಪವನ್ನೂ ಲೆಕ್ಕಿಸದೆ ರಥ ಎಳೆದ ಭಕ್ತ ಸಮೂಹ: </strong>ರಥೋತ್ಸವದ ವೇಳೆ 34 ಡಿಗ್ರಿ ಸೆಲ್ಸಿಯಸ್ನಿಂದ 36 ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿಲಿನ ತೀವ್ರತೆ ಇತ್ತು. ತೇರುಬೀದಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಟ್ಯಾಂಕರ್ ಮೂಲಕ ನೀರು ಹರಿಸಿದರೂ ಬಿಸಿಲಿನ ತಾಪಕ್ಕೆ ಒಣಗಿಹೋಗಿ ರಸ್ತೆ ಬಿಸಿಯಾಗಿತ್ತು. ಸುಡು ಬಿಸಿಲನ್ನೂ ಲೆಕ್ಕಿಸದೆ ಹುಮ್ಮಸ್ಸಿನಲ್ಲಿ ಭಕ್ತರು ರಥ ಎಳೆದರು. ಇದೇ ವೇಳೆ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್ಬಾಬು ಅವರು ಮಜ್ಜಿಗೆ ವಿತರಿಸಿದರು. ಹಲವು ಸಂಘ ಸಂಸ್ಥೆಗಳು ಕುಡಿಯುವ ನೀರು, ತಂಪು ಪಾನೀಯ ವಿತರಣೆ ಮಾಡಿದವು. ಜಾತ್ರೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇತ್ತು.</p>.<p><strong>ಟ್ಯಾಂಕರ್ಗಳ ಮೂಲಕ ನೀರು ಸರಬರಾಜು: </strong>ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗಾಗಿ ಜಿಲ್ಲಾಡಳಿತ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಿಂದ 35ಕ್ಕೂ ಹೆಚ್ಚು ಟ್ಯಾಂಕರ್ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗದ ಕೆ.ಎಂ.ಎಫ್ನಿಂದ 23 ಸಾವಿರ ಲೀಟರ್ ಸಾಮರ್ಥ್ಯದ 7 ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ಜಾತ್ರೆಗೆ ಬಂದಿದ್ದ ಎಲ್ಲ ಭಕ್ತರಿಗೆ ನೀರಿನ ಉಚಿತ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ತಾಪವಿರುವ ಕಾರಣ ಪಟ್ಟಣದ ರಸ್ತೆಗಳಿಗೆ ಯಥೇಚ್ಛವಾಗಿ ನೀರು ಹರಿಸಲಾಯಿತು.</p>.<p><strong>ಕೊಬ್ಬರಿ ಸುಡುವ ಸಂಪ್ರದಾಯ: </strong>ದೇವಾಲಯಕ್ಕೆ ಬರುವ ಭಕ್ತರು ಕೊಬ್ಬರಿ ಸುಡುವ ಸಂಪ್ರದಾಯವಿದೆ. ದೇವಾಲಯದ ಸಿಬ್ಬಂದಿ ಕೊಬ್ಬರಿ ಸುಡಲು ಸ್ಥಳ ನಿಗದಿ ಮಾಡಿದ್ದರು. 5 ಅಡಿ ಆಳ, 6 ಅಡಿ ಅಗಲದಲ್ಲಿ ನಿರ್ಮಿಸಿದ್ದ ಜಾಗಕ್ಕೆ 4 ಅಡಿ ದೂರದಿಂದ ಕೊಬ್ಬರಿ ಎಸೆಯುವ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಸುರಕ್ಷತೆ ದೃಷ್ಟಿಯಿಂದ ಸುತ್ತಲೂ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಲಾಗಿತ್ತು. </p>.<p><strong>ಭದ್ರತೆ ಕಾರ್ಯ ಯಶಸ್ವಿ: </strong>ತಿಪ್ಪೇರುದ್ರಸ್ವಾಮಿ ಜಾತ್ರೆಯು ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗೆ ಸಾಕ್ಷಿಯಾಯಿತು. ಜಾತ್ರೆಯಲ್ಲಿ ಕಳ್ಳತನ, ಸರಗಳ್ಳತನ, ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಭದ್ರತೆಯ ಮೇಲ್ವಿಚಾರಣೆ ನೋಡಿಕೊಂಡರು. ರಥದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಲ್ಲಿಯೂ ಪ್ರಾಣಿಬಲಿ ನಡೆಯದಂತೆ ಎಚ್ಚರ ವಹಿಸಲಾಗಿತ್ತು. </p>.<p>ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ, ಸಫಾಯಿ ಕರ್ಮಾಚಾರಿ ನಿಗದ ಅಧ್ಯಕ್ಷ ಪಿ.ರಘು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಕುಮಾರಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಕಾಂತರಾಜ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಧರ್ಮದತ್ತಿ ಇಲಾಖೆಯ ಉಪ ಆಯುಕ್ತ ಎಸ್.ಪಿ.ಬಿ.ಮಹೇಶ್ ಸೇರಿದಂತೆ ಲಕ್ಷಾಂತರ ಭಕ್ತ ಸಮೂಹ ನೆರೆದಿತ್ತು. </p>.<h2> ₹32 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು </h2><p>ದೇವರ ಮುಕ್ತಿ ಬಾವುಟವನ್ನು ಶಿರಾ ತಾಲ್ಲೂಕಿನ ಹೆಂಜಲಗೆರೆ ಶ್ರೀನಾಥ್ ಅವರು ಹರಾಜಿನಲ್ಲಿ ಪಡೆದುಕೊಂಡರು. ರಥ ಎಳೆಯುವ ಮುನ್ನ ದೇವರ ಮುಕ್ತಿ ಬಾವುಟವನ್ನು ಬಹಿರಂಗವಾಗಿ ಹರಾಜು ಮಾಡಲಾಗುತ್ತದೆ. ₹11 ಲಕ್ಷದಿಂದ ಆರಂಭವಾದ ಹರಾಜು ₹31 ಲಕ್ಷದವರೆಗೂ ಸಾಗಿತು. ನಂತರ ಶ್ರೀನಾಥ್ ₹32 ಲಕ್ಷಕ್ಕೆ ಕೂಗಿ ಬಾವುಟ ಪಡೆದುಕೊಂಡರು. ಜಾತ್ರೆಯಲ್ಲಿ ಮುಕ್ತಿಬಾವುಟ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿದೆ.</p>.<h2> ಕೃಷಿ ವಸ್ತು ಪ್ರದರ್ಶನ </h2><p>ಸಾವಿರಾರು ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ರೇಷ್ಮೆ ಇಲಾಖೆ ಪಶುಸಂಗೋಪನೆ ಇಲಾಖೆಗಳಿಂದ ವಸ್ತು ಪ್ರದರ್ಶನ ಮತ್ತು ರಾಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಜಾತ್ರೆಯಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ಕೃಷಿ ಸಲಕರಣೆಗಳು ಬೀಜ ಗೊಬ್ಬರ ನೀರಿನ ಮಿತವಾದ ಬಳಕೆ ಹೆಚ್ಚಿನ ಲಾಭಾಂಶ ಪಡೆಯುವ ವಿಧಾನ ಸೇರಿದಂತೆ ವಿವಿಧ ಮಾಹಿತಿಗಳು ರೈತರಿಗೆ ದೊರೆತವು. ಜೊತೆಗೆ ಜೋಡಿ ಹೋರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಉತ್ತಮವಾದ ರಾಸುಗಳಿಗೆ ಪ್ರಶಸ್ತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕನಹಟ್ಟಿ:</strong> ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ, ಅವಧೂತ ಪರಂಪರೆಯ ಸಂತ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.</p>.<p>ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ನಾಯಕ, ಕಾಯಕವೇ ಕೈಲಾಸವೆಂಬ ತತ್ವವನ್ನು ಅಕ್ಷರಶಃ ಪಾಲಿಸಿ, ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವವನ್ನು ಸಾರಿದ ಕಾಯಕ ಯೋಗಿಯ ಜಾತ್ರೆಯು ಶುಕ್ರವಾರ ಮಧ್ಯಾಹ್ನ ಸಕಲ ಶಾಸ್ತ್ರ ಸಂಪ್ರದಾಯಗಳೊಂದಿಗೆ ನಡೆಯಿತು.</p>.<p>ಜಾತ್ರೆಯಲ್ಲಿ ಸೇರಿದ್ದ ಲಕ್ಷಾಂತರ ಭಕ್ತಸಾಗರದ ನಡುವೆ ಏಳು ಬಣ್ಣಗಳ ಬಾವುಟಗಳಿಂದ ಅಲಂಕಾರಗೊಂಡ 5 ಚಕ್ರದ ಮಹಾರಥದಲ್ಲಿ ಮಧ್ಯಾಹ್ನ 3 ಗಂಟೆಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೈವಸ್ಥರ ಸಮ್ಮುಖದಲ್ಲಿ ಮುಕ್ತಿಬಾವುಟ ಹರಾಜು ನಡೆಸಿ ಮಹಾಮಂಗಳಾರತಿ ಮಾಡಲಾಯಿತು. ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ರಾಜಗಾಂಭೀರ್ಯದಿಂದ ಪಾದಗಟ್ಟೆಯ ಕಡೆಗೆ ರಥ ಸಾಗಿತು.</p>.<p>ಬೃಹತ್ ಗಾತ್ರದ ಅಂದಾಜು 40 ಮೀಟರ್ ಉದ್ದದ ಎರಡು ಮಿಣಿ (ಹಗ್ಗ) ಹಿಡಿದು ಭಕ್ತರು ಮಹಾರಥವನ್ನು ಎಳೆದರು. ಬಾಳೆಹಣ್ಣು, ಚೂರುಬೆಲ್ಲ, ಮೆಣಸು, ದವನದ ಹೂವನ್ನು ರಥದತ್ತ ತೂರಿದರು. ಸಂಜೆ 5.45ಕ್ಕೆ ಮಹಾರಥವು ಪಾದಗಟ್ಟೆ ತಲುಪಿದ ಬಳಿಕ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ಅರ್ಚಕರು ದೇವರನ್ನು ರಥದಲ್ಲಿ ಹಿಮ್ಮುಖವಾಗಿ ತಿರುಗಿಸಿ ಪ್ರತಿಷ್ಠಾಪಿಸಿದರು. ಬಂದ ಮಾರ್ಗವಾಗಿ ಸಾಗಿದ ರಥ, ಸ್ವಸ್ಥಾನ ತಲುಪಿತು. ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.</p>.<p><strong>ಜನಪದ ಕಲಾಮೇಳಗಳ ಮೆರುಗು: </strong>ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಜನಪದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಿದವು. ಡೊಳ್ಳು, ಕಂಸಾಳೆ, ವೀರಗಾಸೆ, ತಮಟೆ, ಉರುಮೆ, ಚೌಡಿಕೆ, ಗೊರವರು, ಕರಡೆವಾದ್ಯ, ನಂದಿಧ್ವಜ, ನಂದಿಕೋಲು ಕುಣಿತಗಳು ನೊಡುಗರ ಗಮನಸೆಳೆದವು.</p>.<p><strong>ಸಾಧು–ಸಂತರ ಸಮಾಗಮ: </strong>ಇದು ಮೂಲತಃ ಸಾಧುಸಂತರ ಜಾತ್ರೆಯಾಗಿದ್ದು, ವಿವಿಧ ಜಿಲ್ಲೆಗಳ ಸಾಧು ಸಂತರು ಹೊರಮಠದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಮಹಿಳೆ ಹಾಗೂ ಪುರುಷ ಸನ್ಯಾಸಿಗಳು, ಸಾಧುಗಳು ವಿವಿಧ ಪೂಜೆಗಳನ್ನು ಮಾಡಿ ಹಾಡು ಭಜನೆಗಳಿಂದ ದೇವರನ್ನು ಕೊಂಡಾಡಿದರು. ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿದರು.</p>.<p><strong>ಬಿಸಿಲಿನ ತಾಪವನ್ನೂ ಲೆಕ್ಕಿಸದೆ ರಥ ಎಳೆದ ಭಕ್ತ ಸಮೂಹ: </strong>ರಥೋತ್ಸವದ ವೇಳೆ 34 ಡಿಗ್ರಿ ಸೆಲ್ಸಿಯಸ್ನಿಂದ 36 ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿಲಿನ ತೀವ್ರತೆ ಇತ್ತು. ತೇರುಬೀದಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಟ್ಯಾಂಕರ್ ಮೂಲಕ ನೀರು ಹರಿಸಿದರೂ ಬಿಸಿಲಿನ ತಾಪಕ್ಕೆ ಒಣಗಿಹೋಗಿ ರಸ್ತೆ ಬಿಸಿಯಾಗಿತ್ತು. ಸುಡು ಬಿಸಿಲನ್ನೂ ಲೆಕ್ಕಿಸದೆ ಹುಮ್ಮಸ್ಸಿನಲ್ಲಿ ಭಕ್ತರು ರಥ ಎಳೆದರು. ಇದೇ ವೇಳೆ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್ಬಾಬು ಅವರು ಮಜ್ಜಿಗೆ ವಿತರಿಸಿದರು. ಹಲವು ಸಂಘ ಸಂಸ್ಥೆಗಳು ಕುಡಿಯುವ ನೀರು, ತಂಪು ಪಾನೀಯ ವಿತರಣೆ ಮಾಡಿದವು. ಜಾತ್ರೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇತ್ತು.</p>.<p><strong>ಟ್ಯಾಂಕರ್ಗಳ ಮೂಲಕ ನೀರು ಸರಬರಾಜು: </strong>ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗಾಗಿ ಜಿಲ್ಲಾಡಳಿತ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಿಂದ 35ಕ್ಕೂ ಹೆಚ್ಚು ಟ್ಯಾಂಕರ್ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗದ ಕೆ.ಎಂ.ಎಫ್ನಿಂದ 23 ಸಾವಿರ ಲೀಟರ್ ಸಾಮರ್ಥ್ಯದ 7 ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ಜಾತ್ರೆಗೆ ಬಂದಿದ್ದ ಎಲ್ಲ ಭಕ್ತರಿಗೆ ನೀರಿನ ಉಚಿತ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ತಾಪವಿರುವ ಕಾರಣ ಪಟ್ಟಣದ ರಸ್ತೆಗಳಿಗೆ ಯಥೇಚ್ಛವಾಗಿ ನೀರು ಹರಿಸಲಾಯಿತು.</p>.<p><strong>ಕೊಬ್ಬರಿ ಸುಡುವ ಸಂಪ್ರದಾಯ: </strong>ದೇವಾಲಯಕ್ಕೆ ಬರುವ ಭಕ್ತರು ಕೊಬ್ಬರಿ ಸುಡುವ ಸಂಪ್ರದಾಯವಿದೆ. ದೇವಾಲಯದ ಸಿಬ್ಬಂದಿ ಕೊಬ್ಬರಿ ಸುಡಲು ಸ್ಥಳ ನಿಗದಿ ಮಾಡಿದ್ದರು. 5 ಅಡಿ ಆಳ, 6 ಅಡಿ ಅಗಲದಲ್ಲಿ ನಿರ್ಮಿಸಿದ್ದ ಜಾಗಕ್ಕೆ 4 ಅಡಿ ದೂರದಿಂದ ಕೊಬ್ಬರಿ ಎಸೆಯುವ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಸುರಕ್ಷತೆ ದೃಷ್ಟಿಯಿಂದ ಸುತ್ತಲೂ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಲಾಗಿತ್ತು. </p>.<p><strong>ಭದ್ರತೆ ಕಾರ್ಯ ಯಶಸ್ವಿ: </strong>ತಿಪ್ಪೇರುದ್ರಸ್ವಾಮಿ ಜಾತ್ರೆಯು ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗೆ ಸಾಕ್ಷಿಯಾಯಿತು. ಜಾತ್ರೆಯಲ್ಲಿ ಕಳ್ಳತನ, ಸರಗಳ್ಳತನ, ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಭದ್ರತೆಯ ಮೇಲ್ವಿಚಾರಣೆ ನೋಡಿಕೊಂಡರು. ರಥದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಲ್ಲಿಯೂ ಪ್ರಾಣಿಬಲಿ ನಡೆಯದಂತೆ ಎಚ್ಚರ ವಹಿಸಲಾಗಿತ್ತು. </p>.<p>ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ, ಸಫಾಯಿ ಕರ್ಮಾಚಾರಿ ನಿಗದ ಅಧ್ಯಕ್ಷ ಪಿ.ರಘು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಕುಮಾರಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಕಾಂತರಾಜ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಧರ್ಮದತ್ತಿ ಇಲಾಖೆಯ ಉಪ ಆಯುಕ್ತ ಎಸ್.ಪಿ.ಬಿ.ಮಹೇಶ್ ಸೇರಿದಂತೆ ಲಕ್ಷಾಂತರ ಭಕ್ತ ಸಮೂಹ ನೆರೆದಿತ್ತು. </p>.<h2> ₹32 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು </h2><p>ದೇವರ ಮುಕ್ತಿ ಬಾವುಟವನ್ನು ಶಿರಾ ತಾಲ್ಲೂಕಿನ ಹೆಂಜಲಗೆರೆ ಶ್ರೀನಾಥ್ ಅವರು ಹರಾಜಿನಲ್ಲಿ ಪಡೆದುಕೊಂಡರು. ರಥ ಎಳೆಯುವ ಮುನ್ನ ದೇವರ ಮುಕ್ತಿ ಬಾವುಟವನ್ನು ಬಹಿರಂಗವಾಗಿ ಹರಾಜು ಮಾಡಲಾಗುತ್ತದೆ. ₹11 ಲಕ್ಷದಿಂದ ಆರಂಭವಾದ ಹರಾಜು ₹31 ಲಕ್ಷದವರೆಗೂ ಸಾಗಿತು. ನಂತರ ಶ್ರೀನಾಥ್ ₹32 ಲಕ್ಷಕ್ಕೆ ಕೂಗಿ ಬಾವುಟ ಪಡೆದುಕೊಂಡರು. ಜಾತ್ರೆಯಲ್ಲಿ ಮುಕ್ತಿಬಾವುಟ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿದೆ.</p>.<h2> ಕೃಷಿ ವಸ್ತು ಪ್ರದರ್ಶನ </h2><p>ಸಾವಿರಾರು ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ರೇಷ್ಮೆ ಇಲಾಖೆ ಪಶುಸಂಗೋಪನೆ ಇಲಾಖೆಗಳಿಂದ ವಸ್ತು ಪ್ರದರ್ಶನ ಮತ್ತು ರಾಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಜಾತ್ರೆಯಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ಕೃಷಿ ಸಲಕರಣೆಗಳು ಬೀಜ ಗೊಬ್ಬರ ನೀರಿನ ಮಿತವಾದ ಬಳಕೆ ಹೆಚ್ಚಿನ ಲಾಭಾಂಶ ಪಡೆಯುವ ವಿಧಾನ ಸೇರಿದಂತೆ ವಿವಿಧ ಮಾಹಿತಿಗಳು ರೈತರಿಗೆ ದೊರೆತವು. ಜೊತೆಗೆ ಜೋಡಿ ಹೋರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಉತ್ತಮವಾದ ರಾಸುಗಳಿಗೆ ಪ್ರಶಸ್ತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>