ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪಿಟ್ಲಾಲಿ ರಾಮಣ್ಣ ಮಾತನಾಡಿ, ‘ಶ್ರೀಗಂಧ ಬೆಳೆಗಾರರ ಉತ್ಪಾಧಕ ಸಂಸ್ಥೆ ಸ್ಥಾಪಿಸಬೇಕು. ಸಂಶೋಧನೆ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಶ್ರೀಗಂಧ ಅತ್ಯಂತ ದುಬಾರಿ ಮರವಾಗಿದ್ದು, ವಿಮೆ ಸೌಲಭ್ಯ ಕಲ್ಪಿಸಬೇಕು. ಕಳವು ಅಥವಾ ನಷ್ಟ ಸಂಭವಿಸಿದಾಗ ರೈತರಿಗೆ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು.