‘ಶನಿವಾರ ಸಂಜೆ 5.30ಕ್ಕೆ ದೂರವಾಣಿ ಕರೆ ಮಾಡಿದ್ದ ವಿಷ್ಣು, ವಿಮಾನ ಟಿಕೆಟ್ ಬುಕ್ ಆಗಿದೆ. ರಾತ್ರಿ 2 ಗಂಟೆಯ ವೇಳೆಗೆ ವಿಮಾನ ದೆಹಲಿ ತಲುಪಲಿದೆ. ಭಾನುವಾರ ಸಂಜೆಯ ಒಳಗೆ ಬೆಂಗಳೂರಿಗೆ ಬರುವುದಾಗಿ ತಿಳಿಸಿದ. ನಮಗೆ ನಂಬಿಕೆ ಬರಲಿ ಎಂದು ವಿಮಾನದ ಟಿಕೆಟ್ ಅನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ್ದಾನೆ. ಹತ್ತು ದಿನಗಳ ನರಕ ಯಾತನೆಗೆ ಸ್ವಲ್ಪಮಟ್ಟಿನ ಮುಕ್ತಿ ದೊರೆತಿದೆ. ಭಾನುವಾರ ಸಂಜೆ ಆಗುವುದನ್ನು ಕಾತುರದಿಂದ ನೋಡುತ್ತಿದ್ದೇವೆ’ ಎಂದರು.