ಹಿರಿಯೂರು: ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಡಿ.11ರಿಂದ 13ರ ವರೆಗೆ ನಡೆಯಲಿರುವ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ಶುಭ ಹಾರೈಸಿ ಬೀಳ್ಕೊಡಲಾಯಿತು.
ಸ್ಥಳೀಯ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ರೀಡಾ ತಂಡದವರಿಗೆಸಮವಸ್ತ್ರ ವಿತರಿಸಿದ ನಗರಸಭೆ ಸದಸ್ಯ ಗಣೇಶ್ ಕದ್ರು, ‘ನಮ್ಮ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮತ್ತೊಮ್ಮೆ ಕ್ರೀಡಾ ನಕ್ಷೆಯಲ್ಲಿ ಹಿರಿಯೂರಿನ ಹೆಸರು ದಾಖಲಾಗುವ ರೀತಿ ಸಾಮರ್ಥ್ಯ ತೋರುವರು’ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ತರಬೇತುದಾರ ಶಿವಪ್ರಸಾದ್, ಮ್ಯಾನೇಜರ್ ಜಗದೀಶ್ ಭಂಡಾರಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಯೋಗಾನಂದ್, ವಿಜಯ್ ಕುಮಾರ್, ರಂಗನಾಥ್, ಪುನೀತ್, ಮಲ್ಲೇಶ್ ಇದ್ದರು.