ಸಿರಿಗೆರೆಯಲ್ಲಿ 1949ರಲ್ಲಿ ಲಿಂ. ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪ್ರಥಮ ಬಾರಿಗೆ ತರಳಬಾಳು ಹುಣ್ಣಿಮೆ ಆರಂಭವಾಯಿತು. 1952ರಲ್ಲಿ ಜೆ.ಎಂ. ಇಮಾಮ್ಸಾಬ್ ಅಧ್ಯಕ್ಷತೆಯಲ್ಲಿ ಜಗಳೂರಿನಲ್ಲಿ ನಡೆಯಿತು. ಅಲ್ಲಿಂದ ಇಲ್ಲಿವರೆಗೆ ರಾಜ್ಯದ ವಿವಿಧ ಊರುಗಳಲ್ಲಿ 75 ತರಳಬಾಳು ಹುಣ್ಣಿಮೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಸಾಸಲುಹಳ್ಳ (ತರಳಬಾಳು ವೃತ್ತ), ಭೀಮಸಮುದ್ರ, ದಾವಣಗೆರೆ ಪ್ರತ್ಯೇಕ ಜಿಲ್ಲೆ ಆಗುವ ಮೊದಲು ಜಗಳೂರು, ಹರಿಹರ, ದಾವಣಗೆರೆ, ಆನಗೋಡಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮ ನಡೆದಿದೆ.