ಒತ್ತಾಯ: ಹಿರಿಯೂರಿನಿಂದ ಲಕ್ಕವ್ವನಹಳ್ಳಿ, ದೊಡ್ಡಗಟ್ಟ, ಕಾತ್ರಿಕೇನಹಳ್ಳಿ, ಕುರುಬರಹಳ್ಳಿ ಮಾರ್ಗವಾಗಿ ಹೊಸದುರ್ಗಕ್ಕೆ ಕೆಎಸ್ಆರ್ಟಿಸಿ ಬಸ್ಸು ಓಡಿಸಿದಲ್ಲಿ ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೆ, ಹಣ್ಣು–ಹಾಲು–ತರಕಾರಿ ಮಾರಲು ಬರುವ ರೈತರಿಗೆ ಅನುಕೂಲವಾಗುತ್ತದೆ. ಸಂಭವನೀಯ ಅವಘಡಗಳನ್ನು ತಪ್ಪಿಸಿದಂತಾಗುತ್ತದೆ ಎಂದು ಪುನೀತ್ ಪಟೇಲ್, ಎಸ್. ಸಂತೋಷ್, ಮನೋಜ್ ನಾಯ್ಕ್, ಸುದರ್ಶನ್, ವರ್ಷಿತಾ, ಅಂಬುಜ, ಕುಸುಮಾ, ಕೀರ್ತನ, ರಮ್ಯಾ, ಕಾವ್ಯ ಒತ್ತಾಯಿಸಿದ್ದಾರೆ.