‘ನಾವು ರೈತರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ಕೆಲವರು ಸೊಸೈಟಿಯಲ್ಲಿ ಸಾಲ ತೆಗೆದುಕೊಂಡು, ಬ್ಯಾಂಕಿಗೆ ಬಂದು ಸಾಲಮನ್ನಾ ಬಗ್ಗೆ ಕೇಳ್ತಾರೆ. ಆಧಾರ್ ನಂಬರ್ ಲಿಂಕ್ ಆಗಿರುವುದರಿಂದ ಎರಡು ಕಡೆ ಸಾಲಮನ್ನಾ ಆಗಲು ಸಾಧ್ಯವೇ? ನಾವು ಹಳ್ಳಿಗಳಿಗೆ ಹೋದ್ರೆ, ಯಾಕ್ರೀ ಬಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. 83 ಜನರಿಗೆ ನೋಟಿಸ್ ನೀಡಿದ್ದು, 10 ಜನ ಮಾತ್ರ ಬಂದು ಉತ್ತರಿಸಿದ್ದಾರೆ. ಉಳಿದವರ ಪೋನ್ ಸ್ವಿಚ್ಡ್ ಆಫ್ ಬರುತ್ತದೆ. ನಾವೂ ಮೇಲಧಿಕಾರಿಗಳಿಗೆ ಉತ್ತರ ನೀಡಬೇಕಲ್ಲವೆ?’ ಎಂದು ಮೇಟಿಕುರ್ಕೆ ಬ್ಯಾಂಕ್ ಶಾಖೆ ವ್ಯವಸ್ಥಾಪಕ ರಾಜೇಶ್ ಕೇಳಿದರು.